20 September 2026 |

ಕುದ್ರೆಬೆಟ್ಟು ಸರ್ಕಾರಿ ಶಾಲೆಗೆ ಎಂಆರ್‌ಪಿಎಲ್‌(MRPL)ನಿಂದ ₹20 ಲಕ್ಷ ಅನುದಾನ; ಶಾಲಾ ಸಭಾಭವನಕ್ಕೆ ಶಂಕುಸ್ಥಾಪನೆ

  • 21 Aug 2026 10:30:33 AM

ಬಂಟ್ವಾಳ/ಬಾಳ್ತಿಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇಲ್ಲಿ 2026-27ನೇ ಸಾಲಿನಲ್ಲಿ ಶಾಲಾ ಸಭಾಭವನ ನಿರ್ಮಾಣಕ್ಕಾಗಿ ಎಂಆರ್‌ಪಿಎಲ್‌ನ (MRPL) ಸಿಎಸ್‌ಆರ್‌ ನಿಧಿಯಿಂದ ಸುಮಾರು ₹20 ಲಕ್ಷ ಅನುದಾನ ಮಂಜೂರಾಗಿದೆ.

 

ಈ ಅನುದಾನದಡಿ ನಿರ್ಮಾಣಗೊಳ್ಳಲಿರುವ ಶಾಲಾ ಸಭಾಭವನದ ಶಂಕುಸ್ಥಾಪನಾ ಕಾರ್ಯಕ್ರಮವು ಆಗಸ್ಟ್ 20ರಂದು ನೆರವೇರಿತು.

 

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ವಿಠಲ, ಉಪಾಧ್ಯಕ್ಷರಾದ ಉಷಾ ಕುಮಾರಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಲೋಕಾನಂದ ಏಳ್ತಿಮಾರ್, ಬಾಳ್ತಿಲ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸುಂದರ ಸಾಲಿಯಾನ್, ಪಾಣೆ ಮಂಗಳೂರು ರೈತರ ಸೇವಾ ಸಹಕಾರಿ ಸೊಸೈಟಿಯ ನಿವೃತ್ತ ಸಿಇಒ ಮೋಹನ್ ಪ್ರಭು, ಹಿರಿಯ ನಾಗರಿಕ ಕಿಟ್ಟಣ್ಣ, ಕಲ್ಲಡ್ಕ ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್, ಶಾಲೆಯ ಮುಖ್ಯೋಪಾಧ್ಯಾಯರಾದ ದೇವಿಕಾ ಬಿ., ಅಂಗನವಾಡಿ ಶಿಕ್ಷಕಿ ಸುರೇಖಾ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ, ಅಂಗನವಾಡಿ ಸಹಾಯಕಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ಶಾಲೆಗೆ ಸಭಾಭವನ ನಿರ್ಮಾಣವಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ಸಭೆಗಳು ಮತ್ತು ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ.