20 September 2026 |

ಸುಳ್ಯದಲ್ಲಿ ಲಾರಿ ಡಿಕ್ಕಿ: ಪುತ್ತೂರು ನಿವಾಸಿ ಮೃತ

  • 20 Sep 2026 10:49:26 AM

ಸುಳ್ಯ: ತಾಲೂಕಿನ ವಿನೋಭಾನಗರದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ಸೆಪ್ಟೆಂಬರ್ 19ರ ಸಂಜೆ ನಡೆದಿದೆ.

 

ಮೃತರನ್ನು ಪುತ್ತೂರು ತಾಲೂಕಿನ ಕೋಡಿಪಾಡಿ ನಿವಾಸಿ ದೀಪಕ್ ಎನ್. ಎಂದು ಗುರುತಿಸಲಾಗಿದೆ.

 

ಪತ್ರಿಕಾ ಪ್ರಕಟಣೆಯಲ್ಲಿರುವ ಮಾಹಿತಿಯಂತೆ, ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿ ಚಲಾಯಿಸುತ್ತಿದ್ದ KA-01-AM-2449 ನೋಂದಣಿ ಸಂಖ್ಯೆಯ ಲಾರಿ ಅಜಾಗರೂಕತೆಯಿಂದ ಚಲಿಸಿ ದೀಪಕ್ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಘಟನೆ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.