ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ದಿನದಂದು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಕ್ಷಿತಾ ಶೆಟ್ಟಿಯನ್ನು 24 ಗಂಟೆ ಕಳೆಯುವುದರೊಳಗೆ ಎಲಿಮಿನೇಷನ್ ಮಾಡಲಾಗಿತ್ತು. ಆದರೆ ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ ರಕ್ಷಿತಾರನ್ನು ಮತ್ತೆ ಮನೆಯ ಒಳಗೆ ಸೇರಿಸಿಕೊಳ್ಳಲಾಗಿದೆ
ಎಲಿಮಿನೇಟ್ ಆಗಿ ಹೊರ ಬಂದಿದ್ದ ಅದೇ ರಕ್ಷಿತಾ ಶೆಟ್ಟಿಯನ್ನು ಮತ್ತೆ ಬಿಗ್ ಬಾಸ್ ಮನೆಯೊಳಕ್ಕೆ ಕಳಿಸಿದೆ. ಕಿಚ್ಚ ಸುದೀಪ್ , ರಕ್ಷಿತಾ ಶೆಟ್ಟಿಯನ್ನು ವೇದಿಕೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಹರುಳು ಉರಿದಂತೆ ಮಾತನಾಡಿದ್ದಾರೆ. ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಿದ್ದು ಏಕೆ ಎಂದು ಒಳಗೆ ಹೋಗಿ ಕೇಳುತ್ತೇನೆ. ಕೇವಲ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಬೇಡಿ ಎಂದು ಹೇಳುತ್ತೇನೆ. ನಾನು ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಡುತ್ತೇನೆ. ನನ್ನ ಬಗ್ಗೆ ಅವರಿಗೆಲ್ಲಾ ಗೊತ್ತಿಲ್ಲ ಎಂದು ಗುಡುಗಿದ್ದಾರೆ. ರಕ್ಷಿತಾ ಶೆಟ್ಟಿ ಜೊತೆಗಿನ ಕಿಚ್ಚನ ಮಾತುಕತೆಯನ್ನು ಕಲರ್ಸ್ ಕನ್ನಡ ಚಾನಲ್ ಬಿಡುಗಡೆ ಮಾಡಿದೆ.