Bollywood, April 28 : ನಾವು ಹಲವಾರು ಭಾರಿ ತಮ್ಮದೇ ಮೂತ್ರವನ್ನು ಕುಡಿದರೆ ಹಲವಾರು ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು ಎನ್ನುವ ಬರಹ, ವಿಡಿಯೋ ಅಥವಾ ಇನ್ನಿತರ ಪಂಡಿತರುಗಳ ಮಾತನ್ನು ಕೇಳುತ್ತಿರುತ್ತೇವೆ ಆದರೆ ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲೊಬ್ಬರು ಹಿಂದಿ ಚಲನಚಿತ್ರದ ಖ್ಯಾತ ನಟನ ನೈಜ ಘಟನೆ ಕೇಳಿ ಜನ ಆಶ್ಚರ್ಯಚಕಿತರಾಗಿದ್ದಾರೆ.
ನನ್ನ ಮೂತ್ರವನ್ನು ಬಿಯರ್ ತರ ಸಿಪ್ ಮಾಡುತ್ತಾ ಕುಡಿದೆ ಮತ್ತು ನಾನು ಗುಣಮುಖನಾದೆ ಅಂತ ಹೇಳಿದ್ದು ಬೇರೆ ಯಾರು ಅಲ್ಲ, ಹಿಂದಿ ಚಲನಚಿತ್ರದ ಖ್ಯಾತ ನಟ ಪರೇಶ್ ರಾವಲ್. ಇವರು ತನ್ನ ಜೀವನದಲ್ಲಿ ನಡೆದ ಅಚ್ಚರಿಯ ಘಟನೆಯನ್ನು ಬಹಳ ವಿಸ್ತರವಾಗಿ ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
'ಹೇರಾ ಫೇರಿ' ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಪರೇಶ್ ರಾವಲ್ ನಟನೆ ಮತ್ತು ಅವರು ನಕ್ಕು ನಲಿಸಿದ ಆ ಸಿನಿಮಾದ ಪಾತ್ರವನ್ನು ಯಾವತ್ತು ಮರೆಯಲು ಸಾಧ್ಯವಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಪರೇಶ್ ರವಾಲ್ ಇತ್ತೀಚಿಗೆ 'ಲಲ್ಲನ್ ಟಾಪ್' ನಲ್ಲಿ ನಡೆದ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದರು.
ಪರೇಶ್ ರಾವಲ್ ರವರು ರಾಜಕುಮಾರ್ ಸಂತೋಷಿ ಅಭಿನಯದ 'ಘಾತಕ್' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕಾಲಿಗೆ ಏಟು ಮಾಡಿಕೊಂಡಿದ್ದರು. ಕಾಲಿಗೆ ಅತೀವ ಏಟು ಬಿದ್ದ ಕಾರಣ ತಕ್ಷಣವೇ ಇವರ ಸೆಟ್ ನ ಸಹಪಾಠಿಗಳು ಆಸ್ಪತ್ರೆಗೆ ಸೇರಿಸಿದ್ದರು. ಪರೇಶ್ ರಾವಲ್ ಈ ಘಟನೆಯಿಂದ ಸ್ವಲ್ಪ ಮಟ್ಟಿಗೆ ಭಯಭೀತಾರಾಗಿದ್ದು, ತನ್ನ ವೃತ್ತಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೇ ಎನ್ನುವಷ್ಟು ಗೊಂದಲಕ್ಕೆ ಜಾರಿದ್ದರು.
ಆದರೆ ಇದೇ ಸಂದರ್ಭದಲ್ಲಿ ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ಇವರ ಅರೋಗ್ಯದ ಬಗ್ಗೆ ಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ನನಗೆ ಒಂದು ವಿಷ್ಮಯಕಾರಿ ಸಲಹೆಯನ್ನು ನೀಡಿದ್ದರು ಎಂದು ಹೇಳುತ್ತಾರೆ ಈ ಖ್ಯಾತ ನಟ.
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮೂತ್ರವನ್ನು ನೀವೇ ಕುಡಿಯಿರಿ ಎನ್ನುವ ಒಂದು ಸಲಹೆಯನ್ನು ವೀರು ದೇವಗನ್ ರವರು ಪರೇಶ್ ರಾವಲ್ ಗೆ ತಿಳಿಸಿದ್ದರು ಮತ್ತು ಅದರ ಪ್ರಕಾರ ಇವರು ಬೆಳಿಗ್ಗೆ ಎದ್ದ ತಕ್ಷಣ ತನ್ನದೇ ಮೂತ್ರವನ್ನು ಬಿಯರ್ ಕುಡಿಯುವ ರೀತಿಯಲ್ಲಿ ಸಿಪ್ ಮಾಡುತ್ತಿದ್ದರಂತೆ.
'ಅವರು ಹೇಳಿದ ರೀತಿಯಲ್ಲಿ 15 ದಿವಸಗಳ ಕಾಲ ತಪ್ಪದೆ ಪಾಲಿಸಿದೆ ಮತ್ತು ನಂತರದ ರಿಪೋರ್ಟ್ ನಲ್ಲಿ ಒಂದು ಅಚ್ಚರಿಯ ಫಲಿತಾಂಶ ದೊರೆತಿತ್ತು. ಡಾಕ್ಟರ್ ನಡೆಸಿದ ಎಕ್ಸ್-ರೇ ರಿಪೋರ್ಟ್ ನಲ್ಲಿ ಕಾಲಿನ ಸಮಸ್ಯೆ ಸರಿಯಾಗಿದೆ ಎಂದು ನಮೂದಿಸಲಾಗಿತ್ತು' ಎನ್ನುತ್ತಾರೆ ಪರೇಶ್ ರಾವಲ್.
ಅವರ ರಿಪೋರ್ಟ್ ನೋಡಿ ಡಾಕ್ಟರ್ ಕೂಡ ಆಶ್ಚರ್ಯಚಕಿತರಾಗಿದ್ದರಂತೆ. ಈ ರೀತಿಯ ಸಮಸ್ಯೆ ಗುಣವಾಗಲು ಕನಿಷ್ಠ ಪಕ್ಷ 2 ರಿಂದ 2.5 ತಿಂಗಳು ತೆಗೆದುಕೊಳ್ಳುತ್ತದೆ ಆದರೆ ಒಂದೂವರೆ ತಿಂಗಳಲ್ಲಿ ಗುಣಮುಖನಾದ ಕಾರಣ ವೈದ್ಯರು ಅಚ್ಚರಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದರಂತೆ.
ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪರೇಶ್ ರಾವಲ್ ಜನರನ್ನು ನಕ್ಕು ನಲಿಸುವುರಲ್ಲಿ ಎತ್ತಿದ ಕೈ. ಯಾವುದೇ ರೀತಿಯ ರೋಲ್ ಮಾಡಲು ಸಿದ್ಧರಿರುವ ಇವರು ಪ್ರಿಯಾದರ್ಶನ್ ರವರ 'ಭೂತ್ ಬಾಂಗ್ಲಾ' ಸಿನಿಮಾದ ಚಿತ್ರೀಕರಣದಲ್ಲಿದ್ದಾರಂತೆ.