ಮಂಗಳೂರು, ಮೇ 03: ನಗರದ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಬರ್ಬರ ಹ*ತ್ಯೆಯ ಹಂತಕರನ್ನು ಬಂದಿಸಿದ ಬೆನ್ನಲ್ಲೇ, ಫಾಝಿಲ್ ಸಹೋದರನ್ನು ಕೂಡ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಫಾಝಿಲ್ ಕೊ*ಲೆಗೆ ಪ್ರತಿಕಾರಕ್ಕೆ ಸುಹಾಸ್ ಕೊ*ಲೆಯಾಗಿರುವುದು ಈಗ ಬಹುತೇಕ ಖಚಿತವಾಗಿದೆ.
ಫಾಝಿಲ್ ಸಹೋದರ ಆದಿಲ್ ಮೆಹರೂಫ್ ಕೊ*ಲೆಯ ಪ್ರಮುಖ ಆರೋಪಿಯಾಗಿದ್ದಾನೆ ಮತ್ತು ಆತನನ್ನು ಬಂಧಿಸಲಾಗಿದೆ.
ಫಾಝಿಲ್ ಹ*ತ್ಯೆ ಮಾಡಿದವರು ಜಾಮೀನಿನಲ್ಲಿ ಹೊರಗಡೆ ಬಂದಿದ್ದಾರೆ ಆದರೆ ಪ್ರವೀಣ್ ನೆಟ್ಟರ್ ಹಂತಕರು ಇನ್ನೂ ಜೈಲಿನಲ್ಲಿದ್ದಾರೆ. ಆದ್ದರಿಂದ, ಸುಹಾಸ್ ಕೊ*ಲೆ ಮಾಡುವುದರ ಮೂಲಕ ಬಲವಾದ ಸಂದೇಶ ಕಳುಹಿಸಬೇಕು ಎನ್ನುವ ಉದ್ದೇಶದಿಂದ ಗುಂಪು ಕಟ್ಟಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರ ಪೊಲೀಸರ ತನಿಖೆ ನಂತರ ಹೊರಬೀಳಲಿದೆ. ನಿನ್ನೆ ಸಂಪೂರ್ಣ ಬಂದ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆ, ಇಂದು ಸಾಮಾನ್ಯ ಸ್ಥಿತಿಗೆ ಮರಳಿದೆ.