ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಲಾಯರ್ ಜಗದೀಶ್ ಅವರ ಅನುಮಾನಾಸ್ಪದ ಸಾವಿನ ಮೂಲ ಕಾರಣ ಪತ್ತೆಯಾಗಿದೆ. ಈ ಸಾವು ಕೊಲೆಯಾಗಿರಬಹುದು ಎಂಬ ಬಲವಾದ ಶಂಕೆ ಮೂಡಿತ್ತು.ಆದರೆ, ಈ ಸಾವಿನ ರಹಸ್ಯವನ್ನು ಪೊಲೀಸರು ಈಗ ಬಯಲಿಗೈದಿದ್ದಾರೆ.
ನಡೆದ ಘಟನೆಯ ವಿವರ
ಮೇ 02 ರಂದು ರಾತ್ರಿ ವಕೀಲ ಜಗದೀಶ್ ದೇಹ ಬೆಂಗಳೂರಿನ ನೈಸ್ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿತ್ತು. ವಕೀಲರ ಸಂಬಂಧಿಯೊಬ್ಬರ ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸಿದ್ದರು. ಈ ಘಟನೆ ಬಹಳಷ್ಟು ಉಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದ್ದು, ಇದು ಒಂದು ಪೂರ್ವನಿಯೋಜಿತ ಕೊಲೆ ಎನ್ನುವ ಹಂತಕ್ಕೆ ತಲುಪಿತ್ತು.
ರಹಸ್ಯ ಬೇಧಿಸಿದ ಪೊಲೀಸರು
ಪೊಲೀಸ್ ತಂಡ ತನಿಖೆ ನಡೆಸಿ ಲಾಯರ್ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ನೈಸ್ ರಸ್ತೆಯಲ್ಲಿ ಜಗದೀಶ್ ಕಾರು ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅವರ ಕಾರಿಗೆ ಲಾರಿಯೊಂದು ಟಚ್ ಆಗಿತ್ತು. ಆಗ ಜಗದೀಶ್ ತನ್ನ ಕಾರು ನಿಲ್ಲಿಸಿ ಲಾರಿ ಡ್ರೈವರ್ ಜೊತೆ ಮಾತುಕತೆ ಆರಂಭಿಸಿದರಂತೆ. ಇಬ್ಬರ ವಾಗ್ವದ ಜೋರದಂತೆ, ಲಾಯರ್ ಜಗದೀಶ್ ತಮಗೆ ಅರಿವಿಲ್ಲದೆ ಮಾರ್ಗ ಮಧ್ಯೆ ಚಲಿಸಿರುತ್ತಾರೆ. ಇದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಮತ್ತೊಂದು ಲಾರಿ ಅವರಿಗೆ ಡಿಕ್ಕಿ ಹೊಡೆದಿತ್ತು. ಆ ಹೊಡೆತಕ್ಕೆ ಜಗದೀಶ್ ಗೆ ಏಟುಗಳಾಗಿ ಬಿದ್ದು ಅತೀವ ರಕ್ತಶ್ರಾವ ಆಗಿರುವುದರಿಂದ ಸಾವಾಗಿರುವ ಬಗ್ಗೆ ಪೊಲೀಸರ ತನಿಖೆ ನಂತರ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಲಾರಿ ಚಾಲಕನಿಗೆ ತಡವಾಗಿ ಅರಿವಿಗೆ ಬಂದ ಘಟನೆ, ಬಂಧನ
ಜಗದೀಶ್ ರವರಿಗೆ ತಾಗಿದ ಲಾರಿ ಚಾಲಕನಿಗೆ ಸುಮಾರು ಅರ್ಧ ಕಿ. ಮೀ ಚಲಿಸಿದ ನಂತರ ಹಿಂಬದಿಗೆ ಏನೋ ತಾಗಿದೆ ಎಂದು ಅನಿಸಿ ಅಲ್ಲೇ ಲಾರಿ ನಿಲ್ಲಿಸಿ ಸ್ವಲ್ಪ ಹೊತ್ತು ಕಾದಿದ್ದ. ಆದರೆ ಲಾರಿ ಹಿಂದೆ ಯಾರು ಬರದ ಕಾರಣ ಏನು ಆಗಿಲ್ಲ ಎಂದು ಯೋಚಿಸಿ ಮುಂದಕ್ಕೆ ಚಲಿಸಿರುತ್ತಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಲಾರಿ ಚಾಲಕನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಿಂದ ತಿಳಿದು ಬಂದಿದೆ.