06 June 2025 | Join group

ನಾಳೆ ದೇಶದಾದ್ಯಂತ ಮೊಳಗಲಿದೆ ಯುದ್ಧದ ಸೈರನ್ : ಪ್ರಧಾನಿ ಮೋದಿ ಅದೇಶ

  • 05 May 2025 08:42:33 PM

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಮಹತ್ವದ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದೆ. ಮೇ 7 ರಂದು ಹಲವು ರಾಜ್ಯಗಳಲ್ಲಿ ನಾಗರಿಕ ರಕ್ಷಣಾ ಅಭ್ಯಾಸಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

 

ಪ್ರಸಿದ್ಧ ಇಂಗ್ಲಿಷ್ ನ್ಯೂಸ್ ಚಾನೆಲ್ NDTV ಯಲ್ಲಿ ವರದಿಯಾದಂತೆ, ಸೆಕ್ಯೂರಿಟಿ ಡ್ರಿಲ್ ಗಳು "ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆ" (Effective Civil Defence in the Event of a Hostile Attack) ಎಂಬ ಉದ್ದೇಶವನ್ನು ಹೊಂದಿವೆ. 1971ರಲ್ಲಿ ಯುದ್ಧದ ಸಂದರ್ಭದಲ್ಲಿ ನಡೆದಿರುವ ಇಂತಹ ಕವಾಯತುಗಳು ಇದೀಗ ಮರು ಆರಂಭವಾಗುತ್ತಿರುವುದು ತೀವ್ರ ಗಂಭೀರತೆಯ ಸಂಕೇತವಾಗಿದೆ.

 

ಸೆಕ್ಯೂರಿಟಿ ಡ್ರಿಲ್ ಭಾಗವಾಗಿ ಈ ಕೆಳಗಿನ ಅಭ್ಯಾಸ ಕ್ರಮ ಕೈಗೊಳ್ಳಲಿದೆ,

  • ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಮೂಲಕ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಗಳ ಸೂಚನೆ
  • ಶಾಲಾ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ರಕ್ಷಣಾ ಕ್ರಮಗಳ ಕುರಿತು ಪ್ರಾಯೋಗಿಕ ತರಬೇತಿ
  • ತುರ್ತು ಬ್ಲ್ಯಾಕೌಟ್ ಕ್ರಮಗಳು
  • ಪ್ರಮುಖ ಸ್ಥಾವರಗಳ ಮರೆಮಾಚುವಿಕೆ ಮತ್ತು ಸ್ಥಳಾಂತರ ಯೋಜನೆಗಳ ಪರಿಶೀಲನೆ.

 

ಪಹಲ್ಗಾಮ್ ದಾಳಿಯಲ್ಲಿ 26 ಅಮಾನಿಕ ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ಗಡಿಯಲ್ಲಿ ಶಾಂತಿಯ ಸೂಚನೆಗಳು ಕಂಡುಬರುತ್ತಿಲ್ಲ. ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಈ ತರಬೇತಿಗಳನ್ನು ಎಲ್ಲ ರಾಜ್ಯಗಳು ಗಂಭೀರವಾಗಿ ಕೈಗೊಳ್ಳಬೇಕೆಂದು ಕೇಂದ್ರ ಸೂಚಿಸಿದೆ ಎಂದು NDTV ಗೆ ದೊರೆತ ಅಧಿಕೃತ ಮಾಹಿತಿಯ ಮೇರೆಗೆ ವರದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.