ಬೆಂಗಳೂರು, ಮೇ 06: ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಏಪ್ರಿಲ್ 25 ಮತ್ತು 26 ರಂದು ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡಿನ ಬೇಡಿಕೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಾರೆ ಎಂಬ ಆರೋಪದ ಮೇಲೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮೇಲೆ ದೊಡ್ಡ ವಿವಾದವೊಂದು ಸುತ್ತುವರಿಸಿಕೊಂಡಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ಸಲ್ಲಿಸಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಆವಲಹಳ್ಳಿ ಪೊಲೀಸರು ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಹೇಳಿಕೆಯು ರಾಜ್ಯಾದ್ಯಂತ ಕನ್ನಡ ಕಾರ್ಯಕರ್ತರು ಮತ್ತು ಸಂಘಟನೆಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ಸೋನು ನಿಗಮ್ ತನ್ನ ಪ್ರದರ್ಶನದ ಸಮಯದಲ್ಲಿ, ಪ್ರೇಕ್ಷಕ ಯುವಕನೊಬ್ಬ "ಕನ್ನಡ, ಕನ್ನಡ" ಎಂದು ಕೂಗುತ್ತಾ ಕನ್ನಡ ಹಾಡನ್ನು ಹಾಡಿ ಎಂದು ಬೇಡಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯೆಯಾಗಿ, ಸೋನು ನಿಗಮ್ "ಅವನು 'ಕನ್ನಡ, ಕನ್ನಡ' ಎಂದು ಕೂಗಿದ ರೀತಿ ನನಗೆ ಇಷ್ಟವಾಗಲಿಲ್ಲ. ಅಂತಹ ನಡವಳಿಕೆಯಿಂದಾಗಿ ಪಹಲ್ಗಾಮ್ ದಾಳಿಯಂತಹ ಘಟನೆಗಳು ನಡೆಯುತ್ತವೆ" ಎಂದು ಹೇಳಿದರು. ಅವರ ಈ ಹೇಳಿಕೆಗಳನ್ನು ಕನ್ನಡ ಗುಂಪುಗಳು ಕೆಂಗಣ್ಣಿಗೆ ಪಾತ್ರವಾಯಿತು. ರಾಜ್ಯದಾದ್ಯಂತ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಸಂಘಟನೆಗಳು ಅವರ ಈ ಹೇಳಿಕೆ ಅವಮಾನಕರ ಮತ್ತು ಪ್ರಚೋದನಕಾರಿ ಎಂದು ಪರಗಣಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಅಡಿಯಲ್ಲಿ ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), 352 (ಸಾರ್ವಜನಿಕ ಕಿಡಿಗೇಡಿತನವನ್ನು ಪ್ರಚೋದಿಸುವ ಹೇಳಿಕೆಗಳು) ಮತ್ತು 352(1) (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್ಐಆರ್ ಅನ್ನು ಉಲ್ಲೇಖಿಸಲಾಗಿದೆ. ಏಳು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಗಾಯಕನಿಗೆ ಸೂಚಿಸಿದ್ದಾರೆ.
ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಪ್ರಯತ್ನದಲ್ಲಿ, ಸೋನು ನಿಗಮ್ ಭಾನುವಾರ ಒಂದು ವೀಡಿಯೊ ಮತ್ತು ಮುಕ್ತ ಪತ್ರವನ್ನು ಬಿಡುಗಡೆ ಮಾಡಿದರು. ಪತ್ರದಲ್ಲಿ, ಅವರು ಕನ್ನಡ ಭಾಷೆ, ಸಂಗೀತ ಮತ್ತು ಜನರ ಬಗ್ಗೆ ಯಾವಾಗಲೂ ಆಳವಾದ ಗೌರವವನ್ನು ತೋರಿಸಿದ್ದೇನೆ. ಆಗಾಗ್ಗೆ ಕರ್ನಾಟಕದಲ್ಲಿ ಅವರ ಸಂಗೀತ ಕಚೇರಿ ನಿರ್ದಿಷ್ಟವಾಗಿ ಒಂದು ಗಂಟೆಗೂ ಹೆಚ್ಚು ಕನ್ನಡ ಹಾಡುಗಳನ್ನು ಸಿದ್ಧಪಡಿಸುತ್ತಾರೆ ಎಂದು ಹೇಳಿದರು. "ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ಹೆಚ್ಚು ಗೌರವಿಸುತ್ತೇನೆ" ಎಂದು ಅವರು ಬರೆದಿದ್ದಾರೆ, ಪುರಾವೆಯಾಗಿ ನೂರಾರು ವೀಡಿಯೊಗಳಿವೆ ಎಂದು ಅವರು ತಿಳಿಸಿದ್ದರು.
ಈಗ ಮತ್ತೊಂದು ಇನ್ಸ್ಟಾಗ್ರಾಮ್ ನಲ್ಲಿ ಸೋನು ನಿಗಮ್ ಭಾವನಾತ್ಮಕ ಪೋಸ್ಟ್ ಹಾಕುವುದರ ಮೂಲಕ ಕರ್ನಾಟಕದ ಜನತೆಯ ಮುಂದೆ ಕ್ಷಮೆ ಕೇಳಿದ್ದಾರೆ "ಕ್ಷಮಿಸಿ ಕರ್ನಾಟಕ.. ನಿಮ್ಮ ಮೇಲಿನ ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.
ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಈ ಹಿಂದೆ ಸೋನು ನಿಗಮ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.