ಬೆಳ್ತಂಗಡಿ, ಮೇ 06: ತೆಕ್ಕಾರು ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಗ್ರಾಮದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ರವರ 'ಟೀಮ್ ರಕ್ಷಿತ್ ಶಿವರಾಂ' ಎನ್ನುವ ಫೇಸ್ಬುಕ್ ಅಕೌಂಟ್ ನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಮುಸ್ಲಿಮರಿಗೆ ನೀಡಿದ ಗುತ್ತಿಗೆ ಬಗ್ಗೆ ವಿಷಯ ಎತ್ತಿದ್ದು ಅದಕ್ಕೆ ಸಂಬಂಧಪಟ್ಟ ದಾಖಲನೆಗಳನ್ನು ಸಹ ಹಂಚಿದ್ದಾರೆ.
'ಇದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಮಿಷನ್ ಪಡೆದು ರಸ್ತೆ ಮತ್ತು ಕಾಮಗಾರಿಯನ್ನು ಮುಸ್ಲಿಂ ಗುತ್ತಿಗೆದಾರರಿಗೆ ನೀಡಿದ ವಿವರಗಳು..... ವೇದಿಕೆಯಲ್ಲಿ ನಿಂತುಕೊಂಡು ಮುಸ್ಲಿಂ ಸಮಾಜವನ್ನು ನಿಂದಿಸುವುದು..... ಮುಂದಕ್ಕೆ ಇನ್ನಷ್ಟು ವಿವರಗಳೊಂದಿಗೆ ನಿಮ್ಮ ಮುಂದೆ' ಎಂದು ಬರೆದು ದಾಖಲೆಗಳನ್ನು ಲಗತ್ತಿಸಿದ್ದಾರೆ.
ಇದರಲ್ಲಿ ಹಲವಾರು ಕೆಲಸಗಳು ಮುಸ್ಲಿಂ ಗುತ್ತಿಗೆದಾರರಿಗೆ ನೀಡಿದವರ ಹೆಸರು ಮತ್ತು ಯೋಜನೆಯ ವಿವರಗಳನ್ನು ನಮೂದಿಸಲಾಗಿದೆ. ಇದು ಅವರಿಬ್ಬರಿಗೂ ರಾಜಕೀಯವಾಗಿ ಹೋರಾಡಲು ಬಾಗಿಲು ತೆರೆಯಲಿದೆ ಮತ್ತು ಇದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.