ಮಂಗಳೂರು, ಮೇ 07: ಸಂಘದ ಕಾರ್ಯಕರ್ತ, ಹಿಂದೂ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಸ್ಥಳೀಯ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡುತ್ತಾ ಹಿಂದುತ್ವಕ್ಕೋಸ್ಕರ ತಾನು ಮಾಡಿದ ಹೋರಾಟ, ಜನರು ಈಗಲೂ ತೋರಿಸುತ್ತಿರುವ ಪ್ರೀತಿ, ಅನುಭವಿಸಿದ ಕಷ್ಟ ಹೀಗೆ ಹಲವಾರು ವಿಚಾರಗಳನ್ನು ಹಂಚಿದ್ದಾರೆ.
ವಿಜೆ ವಿಖ್ಯಾತ್ (VJ Vikhyath) ಎಂಬ ಯೂಟ್ಯೂಬ್ ಸಂದರ್ಶನದಲ್ಲಿ "ನಾನು ವ್ಯವಸ್ಥೆಯಿಂದ ಹೊರಗೆ ಬಂದು ಸರಿಸುಮಾರು 7 ವರುಷಗಳಾದರು ಸಮಾಜ ನನನ್ನು ಬಿಟ್ಟುಕೊಡಲಿಲ್ಲ. ಪ್ರತಿಯೊಂದು ಸರಿಯು ನೆನೆಸುತ್ತಾರೆ, ಎಲ್ಲಿ ಅವರ ಕಾರ್ಯಕ್ರಮಗಳಿದ್ದರು ನನ್ನನ್ನು ಆಹ್ವಾನಿಸುತ್ತಾರೆ. ಬಹುಶಃ ಇವತ್ತು ಯಾವುದೇ ಅಧಿಕಾರದಲ್ಲಿ ಇಲ್ಲದೆ ಹೋದರು ಸಹ ವರ್ಷಪೂರ್ತಿ ಬ್ಯುಸಿ ಆಗಿರುವ ವ್ಯಕ್ತಿ ನಾನೇ ಆಗಿದ್ದೇನೆ' ಎಂದು ಹೇಳಿದರು.
1994 ರ ಹುಬ್ಬಳಿಯ ಘಟನೆ ಆದ ಮೇಲೆ ನಾನು ಪೂರ್ಣಾವಧಿಯಾಗಿ ಸಂಘಟನೆಗೆ ಹೊರಟವ, ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ಬಂದಿತ್ತು ಆದರೆ ಹಿರಿಯರು, ದುಡಿದವರು, ಈ ವ್ಯವಸ್ಥೆಗೋಸ್ಕರ ದುಡಿದವರು ತುಂಬಾ ಜನರಿದ್ದಾರೆ. ಅವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಿ, ನನಗೆ ಪ್ರಾಯ ಬೇಕಾದಷ್ಟು ಇದೆ, ಮುಂದಕ್ಕೆ ನೋಡೋಣ. ಸದ್ಯಕ್ಕೆ ಸಂಘಟನೆ ಗಟ್ಟಿ ಮಾಡುವ ಕೆಲಸ ಮಾಡುತ್ತೇನೆಂದು ಅಂದಿನ ಶಾಸಕನಾಗುವ ಅವಕಾಶವನ್ನು ತಿರಸ್ಕರಿಸಿದ್ದೆ ಎಂದು ಬೇಸರದಿಂದ ನುಡಿದ್ದಾರೆ.
ಈ ಸಂಪೂರ್ಣ ಸಂದರ್ಶನದಲ್ಲಿ ಬೈಂದೂರಿನ ಬಡಾಕೆರೆಯಲ್ಲಿ ಹೇಗೆ ಹಿಂದೂ ಸಮಾಜ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುತಿತ್ತು ಮತ್ತು ಸತ್ಯಜಿತ್ ಕಾಲಿಟ್ಟ ಮರುದಿವಸದಿಂದ ಯಾವನೊಬ್ಬ ಪೊಲೀಸ್ ಹಿಂದೂಗಳ ಮನೆಗೆ ನಡುರಾತ್ರಿ ತಪಾಸಣೆಗೆ ಬರುವುದನ್ನು ನಿಲ್ಲಿಸಿದರು ಎನ್ನುವುದರ ಬಗ್ಗೆ ಕೂಡ ತಿಳಿಸಿದರು.