ಶಿವಮೊಗ್ಗ, ಮೇ 07: ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳಿಗೆ ದಾಳಿ ನಡೆಸಿ ಹಲವಾರು ಭಯೋತ್ಪಾದಕರನ್ನು ಧ್ವಂಸ ಮಾಡಿದ ಭಾರತೀಯ ಸೇನೆಯನ್ನು ಪಹಲ್ಗಾಮ್ ದಾಳಿಯ ಸಂತ್ರಸ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಮ್ಮ ಕುಟುಂಬಕ್ಕೆ ಶಾಂತಿ ಸಿಕ್ಕಿದೆ": ಪಹಲ್ಗಾಮ್ ದಾಳಿಯ ಸಂತ್ರಸ್ತ ಮಂಜುನಾಥ ರಾವ್ ಅವರ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ ."ದುಃಖದಲ್ಲಿಯೂ ಸಹ, ಇಂದು ಸಂತೋಷದ ಸಂಗತಿ ಇದೆ" ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಶಿವಮೊಗ್ಗದ ಮಂಜುನಾಥ ರಾವ್ ಅವರ ತಾಯಿ ಸುಮತಿ ಹೇಳಿದ್ದಾರೆ. ಸೂಕ್ತ ಉತ್ತರಕ್ಕಾಗಿ ಭಾರತೀಯ ಸೇನೆಯನ್ನು ಶ್ರೀಮತಿ ರಾವ್ ಶ್ಲಾಘಿಸಿದ್ದಾರೆ.
"ನಮ್ಮನ್ನು ತೊರೆದಿರುವ ಮಂಜುನಾಥ ಹಿಂತಿರುಗುವುದಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಶಾಂತಿ ಸಿಕ್ಕಿದೆ" ಎಂದು ಅವರು ಹೇಳಿದರು.
ಮಂಜುನಾಥ್ ತಾಯಿ "ನನ್ನ ಮಗನ ಬಲಿದಾನ ವ್ಯರ್ಥವಾಗಲ್ಲ, ಪ್ರಧಾನಿ ಮೋದಿ ಸರಿಯಾದ ಕ್ರಮ ತಗೆದುಕೊಳ್ಳುತ್ತಾರೆ ಎಂದು ನನಗೆ ಭರವಸೆ ಇದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ : 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಕೇಂದ್ರಗಳಿಗೆ ಭಾರತ ದಾಳಿ! - ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ
ಮಂಜುನಾಥ್ ರಾವ್ ಅವರನ್ನು ತನ್ನ ಹೆಂಡತಿ ಮತ್ತು ಮಗನ ಮುಂದೆ ಬರ್ಬರವಾಗಿ ಗುಂಡು ಹಾಕಿ ಭಯೋತ್ಪಾದಕರು ಪ್ರಾಣ ತೆಗೆದಿದ್ದರು.