15 June 2025 | Join group

ಪಾಕಿಸ್ತಾನದ ವಿರುದ್ಧ ಭಾರತದ ವೈಮಾನಿಕ ದಾಳಿಯಲ್ಲಿ 100 ಉಗ್ರರ ದಮನ : ರಾಜನಾಥ್ ಸಿಂಗ್

  • 08 May 2025 02:59:49 PM

ದೆಹಲಿ, ಮೇ 08 : ಭಾರತ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯ ಪರಿಣಾಮ ನಾವು ಅಂದುಕೊಂಡಕ್ಕಿಂತಲೂ ಭೀಕರವಾಗಿತ್ತು ಎಂಬಹುದು ಈಗ ರಕ್ಷಣಾ ಸಚಿವರ ಹೇಳಿಕೆಯಿಂದ ಸಾಬೀತಾಗಿದೆ. ಭಾರತ ಪಾಕಿಸ್ತಾನದ ಮೇಲೆ ನಡೆಸಿರುವ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 

ಇಂದು ಸರ್ವಪಕ್ಷ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಪಾಕಿಸ್ತಾನದ 100 ಉಗ್ರರು ಬಲಿಯಾಗಿದ್ದರೆಂದು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸಿದ್ದ ಒಟ್ಟು 9 ಭಯೋತ್ಪಾದಕ ನೆಲೆಗಳಿಗೆ ಗುರಿಯಾಗಿಸಿ ದಾಳಿ ಮಾಡಿ ಎಲ್ಲಾ 9 ನೆಲೆಗಳನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ.

 

ವಿರೋಧ ಪಕ್ಷದ ಎಲ್ಲಾ ನಾಯಕರುಗಳ ಸಮ್ಮುಖದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾವು ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುವುದಿಲ್ಲ, ಆದರೆ ಪಾಕಿಸ್ತಾನ ಏನಾದರೂ ಮಾಡಿದರೆ ನಾವು ಕೂಡ ಹಿಂದೆ ಸರಿಯುವುದಿಲ್ಲ ಎಂಬ ಎಚ್ಚರಿಕೆಯ ಮಾತನ್ನು ಆಡಿದರು.

 

ಪ್ರತಿಷ್ಠಿತ ಮಾಧ್ಯಮಗಳಲ್ಲಿ ಪ್ರಸಾರದ ಆದರದ ಮೇಲೆ, ಇದು ಪ್ರಥಮ ಬಾರಿಗೆ ಭಾರತ ಸರಕಾರವು ವೈಮಾನಿಕ ದಾಳಿಗೆ ಬಲಿಯಾದ ಭಯೋತ್ಪಾದಕರ ಸಂಖ್ಯೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.

 

ಭಾರತೀಯ 3 ವಿಭಾಗದ ಸೇನೆಗೆಳು ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದದ ಭಯೋತ್ಪಾದಕ ನೆಲೆಗಳಿಗೆ ಮೇ 07, ಬುಧವಾರ ಮುಂಜಾನೆ ದಾಳಿ ನಡೆಸಿ 9 ನೆಲೆಗಳನ್ನು ಧ್ವಂಸಗೊಳಿಸಿದ್ದು, ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಕುಟುಂಬದ ಸದಸ್ಯರು ಕೇಂದ್ರ ಸರಕಾರ ಮತ್ತು ಸೇನೆಯ ಈ ಕಾರ್ಯಾಚರಣೆಯನ್ನು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.