19 June 2025 | Join group

ಮುಂದುವರಿದಿರುವ 'ಆಪರೇಷನ್ ಸಿಂಧೂರ್'! ಇಂದು ಬೆಳಿಗ್ಗೆಯಿಂದ ಭಾರತ ನಡೆಸಿದ ಪ್ರತಿಕಾರದ ದಾಳಿಯ ತೀವ್ರತೆಯ ವಿವರ ಇಲ್ಲಿದೆ

  • 08 May 2025 08:05:04 PM

ದೆಹಲಿ, ಮೇ 08: ಪಾಕಿಸ್ತಾನದ ವಿರುದ್ಧ ಭಾರತ ಭೀಕರ ದಾಳಿಯನ್ನು ಮುಂದಿವರಿಸಿದೆ. ಈ ಬಾರಿಯ ದಾಳಿಗೆ ಡ್ರೋನ್ ಬಳಕೆ ಮಾಡಲಾಗಿದೆ. ಈ ಬಾರಿ ಭಾರತ, ಪಾಕಿಸ್ತಾನದ ಸೇನಾ ನೆಲೆಗಳಿಗೆ ಗುರಿಯಾಗಿಸಿ ದಾಳಿ ಮಾಡುವ ಅನಿವಾರ್ಯತೆ ಬಂದೊದಗಿದೆ. ಈ ಹಿಂದಿನ ದಾಳಿಯಲ್ಲಿ ಕೇವಲ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿಯನ್ನು ನಡೆಸಿತ್ತು. ಪಾಕಿಸ್ತಾನದ ನಾಗರಿಕರಿಗೆ ಸುದ್ದಿಗೆ ಹೋಗಿರಲಿಲ್ಲ ಜೊತೆಗೆ ಪಾಕಿಸ್ತಾನದ ಸೇನಾ ನೆಲೆಗಳ ವಿಚಾರಕ್ಕೂ ಕೂಡ ಹೋಗಿರಲಿಲ್ಲ.

 

ಭಾರತೀಯ ನಾಗರಿಕ ಮೇಲೆ ಪಾಕಿಸ್ತಾನ ಗುರಿ

ಆಪರೇಷನ್ ಸಿಂಧೂರ ಆದ ಕೂಡಲೇ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿಯನ್ನು ನಡೆಸಲು ಪ್ರಯತ್ನ ಪಟ್ಟಿದೆ. ಒಂದು ಕಡೆ LOC ನಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದರೆ ಮತ್ತೊಂದು ಕಡೆ ನಿನ್ನೆ ಮಧ್ಯರಾತ್ರಿ ಭಾರತದ ಮೇಲೆ ಮಿಸೈಲ್ ದಾಳಿಯನ್ನು ಮಾಡಿದೆ. ಗಡಿ ಭಾಗದಲ್ಲಿರುವ ರಾಜ್ಯಗಳಾದ ಪಂಜಾಬ್, ರಾಜಸ್ತಾನ್, ಗುಜರಾತ್, ಜಮ್ಮು ಕಾಶ್ಮೀರದ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಮಿಸೈಲ್ ದಾಳಿಯನ್ನು ನಡೆಸಿದೆ. ಅದರಲ್ಲಿ ಚೀನಾ ನಿರ್ಮಿತ ಮಿಸೈಲ್ ಕೂಡ ಇತ್ತು ಎಂದು ವರದಿಯಾಗಿದೆ.

 

ಪಾಕಿಸ್ತಾನದ ದಾಳಿಯನ್ನು ನಿಷ್ಕ್ರಿಯಗೊಳಿಸಿದ ಹಿಂದೂಸ್ತಾನ್

ಆದರೆ, ಭಾರತ ಅದಕ್ಕೆ ತಕ್ಷಣ ತಿರುಗೇಟು ಕೊಟ್ಟಿದೆ. ಭಾರತದ ಯಾವುದೇ ಭಾಗಕ್ಕೂ ಕೂಡ ಒಂದು ಸಣ್ಣ ಹಾನಿಯಾಗದಂತೆ ಕಾಪಾಡಿಕೊಂಡಿದೆ. ನಾಗರಿಕರುಗಳಿಗೂ ಕೂಡ ಯಾವುದೇ ಸಮಸ್ಯೆ ಆಗಲಿಲ್ಲ.ಸೈನಿಕರಿಗೂ ಕೂಡ ಯಾವುದೇ ರೀತಿಯ ಸಣ್ಣ ಹಾನಿಯು ಆಗದಂತೆ ಭಾರತದ ಸೇನೆ ನೋಡಿಕೊಂಡಿದೆ.

 

ಸುದರ್ಶನ ಚಕ್ರ (S-400) ಭಾರತದ ದೊಡ್ಡ ಅಸ್ತ್ರ

ಭಾರತದ ವಾಯು ರಕ್ಷಣಾ ವ್ಯವಸ್ಥೆ (Air Defence System) ಬಲಿಷ್ಠವಾಗಿದೆ. ಭಾರತದ ಸುದರ್ಶನ ಚಕ್ರವೆಂದೇ ಕರೆಯುವ S-400, ಪಾಕಿಸ್ತಾನದ ದಾಳಿಯನ್ನು ನಿಷ್ಕ್ರಿಯಗೊಳಿಸಿದೆ. ರಷ್ಯಾದಿಂದ 2020 ರಲ್ಲಿ ನಾಲ್ಕು S-400 ಏರ್ ಡಿಫೆನ್ಸ್ ಸಿಸ್ಟಮ್ ನ್ನು ಭಾರತ ಖರೀದಿ ಮಾಡಿತ್ತು. ಚೀನಾ ಗಡಿಯಲ್ಲಿ ಎರಡು ಮತ್ತು ಹಾಗೆ ಪಾಕಿಸ್ತಾನ ಗಡಿಯಲ್ಲಿ ಎರಡನ್ನು ನಿಯೋಜನೆ ಮಾಡಲಾಗಿದೆ.

 

ಈ ಸಂದರ್ಭದಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದ ಪ್ರಯೋಜನೆ ಆಗಿದೆ. ಒಂದು ವೇಳೆ ವಾಯು ರಕ್ಷಣಾ ವ್ಯವಸ್ಥೆ (Air Defence System) ಇಲ್ಲದೆ ಹೋದರೆ ಪಾಕಿಸ್ತಾನದ ಮಿಸೈಲ್ ದಾಳಿಯಿಂದ ಭಾರತಕ್ಕೆ ದೊಡ್ಡ ರೀತಿಯ ಸಮಸ್ಯೆ ಆಗುವ ಸಾಧ್ಯತೆ ಇತ್ತು. ಪಾಕಿಸ್ತಾನ ಮಾತ್ರ ಭಾರತಕ್ಕೆ ಪ್ರತಿ ದಾಳಿಯನ್ನು ಮಾಡಿದ್ದೇವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಪಟ್ಟಿದೆ.

 

ಪಾಕಿಸ್ತಾನದಲ್ಲಿ ಈಗಾಗಲೇ ಸಾರ್ವಜನಿಕರು ಪಾಕಿಸ್ತಾನ ಸರಕಾರದ ಮೇಲೆ ತಿರುಗಿ ಬಿದ್ದಿದ್ದಾರೆ. ಆದ್ದರಿಂದ ನಾಗರಿಕರನ್ನು ಖುಷಿ ಪಡಿಸುವ ಕೆಲಸ ಮಾಡಿದಂತಿದೆ. S-400 ಸುದರ್ಶನ ಚಕ್ರ ಪಾಕಿಸ್ತಾನದ ಕ್ಷಿಪಣಿಯನ್ನು ಸಂಪೂರ್ಣವಾಗಿ ಹೊಡೆದುರಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಅದಕ್ಕೆ ಸಂಬಂಧಪಟ್ಟಂತಹ 2 ಅವಶೇಷಗಳು ಕೂಡ ಪತ್ತೆಯಾಗಿದೆ. ಹೀಗೆ ಭಾರತದ ಸೈನಿಕರು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಅಮೃತಸರದಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಭಾರತೀಯ ಸೇನೆ ಯಾವುದೇ ಮಾಧ್ಯಮ ಪ್ರಕಟಣೆ ಹೊರಡಿಸಿರಲಿಲ್ಲ ಆದರೆ ಈಗ ಭಾರತೀಯ ಸೇನೆ ಅಧಿಕೃತವಾಗಿ ಪ್ರಕಟಿಸಿದೆ.

 

LOC ನಲ್ಲಿ ಅಪ್ರಚೋದಿತ ಗುಂಡಿಯ ದಾಳಿ

ಪೂಂಚ್ ಸೆಕ್ಟರ್ ಭಾಗದಲ್ಲಿ ಪಾಕಿಸ್ತಾನದ ದಾಳಿಯಿಂದ ಭಾರಿ ಹಾನಿ ಸಂಭವಿಸಿದೆ. ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಿರಂತರವಾಗಿ ಶೆಲ್ (Shell) ಮತ್ತು ಗುಂಡಿನ ದಾಳಿಯನ್ನು ಮುಂದುವರಿಸಿದೆ. ಇದರಿಂದಾಗಿ ಆ ಭಾಗದಲ್ಲಿರುವ ನಾಗರಿಕರ ಮನೆಗೆ ಹಾನಿಯಾಗಿದೆ. ಸೈನಿಕರ ಚೆಕ್ ಪೋಸ್ಟಿಗು ಹಾನಿಯಾಗಿದೆ. 16 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಅದರಲ್ಲಿ 5 ಚಿಕ್ಕ ಕಂದಮ್ಮಗಳು ಕೂಡ ಬಲಿಯಾಗಿದ್ದಾರೆ. ಉಳಿದವರನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಗಿದೆ. ಭಾರತ ಪಾಕಿಸ್ತಾನದ ಉಗ್ರರನ್ನು ಮಾತ್ರ ಗುರಿಯಾಗಿಸಿ ದಾಳಿಯನ್ನು ಮಾಡಿತ್ತು ಆದರೆ ಪಾಕಿಸ್ತಾನ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಇದೇ ಕಾರಣಕ್ಕೆ ಭಾರತ ಪಾಕಿಸ್ತಾನಕ್ಕೆ ತೀವ್ರವಾದ ತಿರುಗೇಟನ್ನು ಕೊಡಬೇಕಾದ ಅನಿವಾರ್ಯತೆ ಬಂದೊದಗಿತು.

 

ಭಾರತದ ದಾಳಿ - ಪಾಕಿಸ್ತಾನದಲ್ಲಿ ಅಲ್ಲೋಲ - ಕಲ್ಲೋಲ

ಆ ಕಾರಣಕ್ಕಾಗಿ ಬೆಳಿಗ್ಗೆ 8 ರಿಂದ 9 ಗಂಟೆಯ ನಡುವೆ ಮತ್ತೊಂದು ದಾಳಿಯನ್ನು ಸಂಘಟಿಸಿತ್ತು. ಲಾಹೋರ್, ಕರಾಚಿ, ರಾವಲ್ಪಿಂಡಿ, ಇಸ್ಲಾಮಾಬಾದ್ ನಗರಗಳಿಗೆ ಡ್ರೋನ್ ಬಂದು ಬೀಳಲು ಶುರು ಆಗಿ ಬಿಟ್ಟಿತ್ತು. ಡ್ರೋನ್ (Drone) ಅಟ್ಯಾಕ್ ನಿಂದ ಬೆಂಕಿ ಹೊತ್ತಿಕೊಂಡಿತ್ತು, ಜನ ಗಾಯಗೊಂಡರು, ಸೈರನ್ ಮೊಳಗಿತ್ತು, ಜನ ಚೆಲ್ಲಾಪಿಲ್ಲಿಯಾದರು. ಈ ದಾಳಿಯ ಬಗ್ಗೆ ಪಾಕಿಸ್ತಾನ ಪತ್ರಿಕಾಗೋಷ್ಠಿ ನಡೆಸಿ ವಿಶ್ವಕ್ಕೆ ತಿಳಿಸಿದೆ. ಅದರ ಜೊತೆಗೆ ನಾವು 2 ಡ್ರೋನ್ ಗಳನ್ನೂ ಹೊಡೆದುರಿಳಿಸಿದ್ದೇವೆ ಎಂದು ಹೇಳಿದೆ.

 

ಭಾರತದಿಂದ ಹಾರೋಪ್ ಎಂಕೆ 2 ಡ್ರೋನ್ ದಾಳಿ

ಭಾರತ ಇಸ್ರೇಲಿನಿಂದ ಹೇರೋಫೆ ಎನ್ನುವ ಡ್ರೋನ್ ಖರೀದಿ ಮಾಡಿದೆ. ಇದು ಮಾನವ ರಹಿತ ವಾಹನ. 9 ಗಂಟೆಗಳ ಕಾಲ ಹಾರಾಟ ಮಾಡಬಲ್ಲದು. 1000 ಕಿ.ಮೀ ಈ ಡ್ರೋನ್ ನ ರೇಂಜ್ ಇದೆಯಂತೆ. ಈ ಹಾರೋಪ್ ಎಂಕೆ 2 ಡ್ರೋನ್ ನ ಮೂಲಕ 12 ಡ್ರೋನ್ ಗಳನ್ನೂ ಬಳಸಿ 12 ನಗರಗಳ ಮೇಲೆ ದಾಳಿಯನ್ನು ಭಾರತ ನಡೆಸಿದೆ. ಪಾಕಿಸ್ತಾನದ ಹೃದಯ ಭಾಗಗಳಾದ ಕರಾಚಿ, ಲಾಹೋರ್, ರಾವಲ್ಪಿಂಡಿ, ಇಸ್ಲಾಮಾಬಾದ್ ಇನ್ನಿತರ ಪ್ರಮುಖ ನಗರಗಳ ಮೇಲೆ ಈ ಡ್ರೋನ್ ನಿಂದ ದಾಳಿಯನ್ನು ಭಾರತ ಮಾಡಿದೆ.

 

ಪಾಕಿಸ್ತಾನದಲ್ಲಿ ಚೀನಾದಿಂದ ಖರೀದಿ ಮಾಡಿದ HQ-9 ಎನ್ನುವಂತ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಇದೆ. ಭಾರತ ಈ ಏರ್ ಡಿಫೆನ್ಸ್ ಸಿಸ್ಟಮ್ ನ್ನು ಹಾರೋಪ್ ಎಂಕೆ 2 ಡ್ರೋನ್ ನ ಮೂಲಕ ಪುಡಿಗಟ್ಟಿಸಿದೆ. ಕೆಲವು ಜನರ ಸಾವು ಆಗಿದೆ ಎಂಬ ವದಂತಿಯೂ ಇದೆ ಆದರೆ ಅದು ಇಷ್ಟರವರೆಗೆ ದೃಡೀಕರಣೆ ಆಗಿಲ್ಲ. ಪಾಕಿಸ್ತಾನ ಹೇಳುವ ಪ್ರಕಾರ 4 ಸೈನಿಕರಿಗೆ ಗಾಯಗಳಾಗಿದೆ ಎಂದು ತಿಳಿಸಿದೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ ಎಂದು ಗೋಳಿಟ್ಟಿದೆ.