ಮಂಗಳೂರು, ಮೇ 10: ಸುಹಾಸ್ ಶೆಟ್ಟಿ ಹ*ತ್ಯೆಯಾದ ನಂತರ ಸರಕಾರದ ಕಡೆಯಿಂದ ಯಾರೊಬ್ಬ ಪ್ರತಿನಿಧಿ ಅಥವಾ ಸಚಿವರು ಸುಹಾಸ್ ಮನೆಗೆ ಭೇಟಿ ನೀಡಿಲ್ಲ ಎನ್ನುವ ಅಪರಾಧದ ಬೆನ್ನಲೇ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪ್ರತಿಕಾರ ನೀಡಿದ್ದಾರೆ.
'ಹ*ತ್ಯೆಯಾದ ಎಲ್ಲರ ಮನೆಗೆ ಸರಕಾರ ಅಥವಾ ಜನಪ್ರತಿನಿಧಿಗಳು ಹೋಗಬೇಕೆಂದೇನಿಲ್ಲ. ಅನೇಕ ಹ*ತ್ಯೆಗಳು ನಡೆಯುತ್ತಿರುತ್ತವೆ, ಯಾವ ಕಾರಣಕ್ಕೆ ಹ*ತ್ಯೆ ನಡೆದಿದೆ ಎಂದು ತಿಳಿದುಕೊಂಡು ಸರಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ ಎಂದು ಗುಂಡೂರಾವ್ ಹೇಳಿದ್ದಾರೆ.
ಸುಹಾಸ್ ಶೆಟ್ಟಿಯನ್ನು ಕೊ*ಲೆ ಮಾಡಿದವರನ್ನು ಹಿಡಿಯಬೇಕು ಮತ್ತು ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂಬುವುದು ನಮ್ಮ ಉದ್ದೇಶ. ನಮ್ಮ ಪೊಲೀಸರು ಈ ಪ್ರಕರಣವನ್ನು ಉತ್ತಮವಾಗಿ ಭೇದಿಸಿ ಎಲ್ಲಾ ವಿಚಾರಗಳನ್ನು ಹೊರ ತಂದಿದ್ದಾರೆ ಆದ್ದರಿಂದ ಈ ಪ್ರಕರಣವನ್ನು ಎನ್ಐಎ ಗೆ ಕೊಡುವ ಅಗತ್ಯವಿಲ್ಲ.
ಸಾಮಾಜಿಕ ಜಾಲತಾಣದಲ್ಲಿರುವ ನಕಲಿ ಅಕೌಂಟ್ ಬಗ್ಗೆ ಕೂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಕಲಿ ಅಕೌಂಟ್ ಪತ್ತೆಹಚ್ಚಿದ್ದಾರೆ ಮತ್ತು ಕೋಮುಪ್ರಚೋದನ ಅಥವಾ ಬೆದರಿಕೆ ಪೋಸ್ಟ್ ಗಳ ಬಗ್ಗೆ ಕೂಡಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.