ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ಶಮನವನಾದ ಬೆನ್ನಲೇ ಅಮೆರಿಕಾಕ್ಕೆ ಪ್ರಧಾನಿ ಮೋದಿ ಸ್ಪಷ್ಟ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅಮೆರಿಕಾದ ಜೆ.ಡಿ ವ್ಯಾನ್ಸ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಭಾರತದ ನಿರ್ಧಾರದ ಬಗ್ಗೆ ತಿಳಿಸಿದ್ದಾರೆಂದು ಸರಕಾರಿ ಮೂಲಗಳಿಂದ ವರದಿಯಾಗಿದೆ.
"ಪಾಕಿಸ್ತಾನವು ದಾಳಿ ಮಾಡಿದರೆ ಭಾರತವು ಪ್ರಬಲವಾಗಿಯೇ ತಕ್ಕ ಪ್ರತ್ಯುತ್ತರ ನೀಡಲಿದೆ" ಎಂದು ಪ್ರಧಾನಿ ಮೋದಿ ಜೆ.ಡಿ ವ್ಯಾನ್ಸ್ ಗೆ ತಿಳಿಸಿದ್ದಾರೆ. ಪಾಕಿಸ್ತಾನದ ಒಳಗೆ ನುಗ್ಗಿ ಈಗಾಗಲೇ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ 9 ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಲಾಗಿದೆ. ಅದಷ್ಟೇ ಅಲ್ಲದೆ, ಪಾಕಿಸ್ತಾನದ ಹಲವು ವಾಯುನೆಲೆಯನ್ನು ಸಹ ಭಾರತ ಧ್ವಂಸಗೊಳಿಸಿದೆ.
ಇನ್ನು ಮುಂದೆ ಭಯೋತ್ಪಾದಕ ದಾಳಿಯಾದರೆ ಅದನ್ನು ಯುದ್ಧವನ್ನಾಗಿ ಘೋಷಣೆ
ನಿನ್ನೆಯ ಕದಮ ವಿರಾಮದ ನಂತರ ಭಾರತ 'ಇನ್ನು ಮುಂದೆ ಭಾರತದ ನೆಲೆದಲ್ಲಿ ಯಾವುದೇ ಭಯೋತ್ಪಾದಕ ದಾಳಿಯಾದರು, ಅದನ್ನು ಯುದ್ಧವನ್ನಾಗಿ ಘೋಷಿಸಿಸಲಾಗುವುದು' ಎಂದು ಘೋಷಿಸಿದೆ. ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ಬಹಳ ದೊಡ್ಡ ಹೊಡೆತ ಬೀಳಲಿದೆ. ಇನ್ನು ಮುಂದೆ ಭಾರತದ ಮೇಲೆ ಭಯೋತ್ಪಾದಕ ದಾಳಿಯಾದರೆ ಭಾರತ ಅದನ್ನು ಯುದ್ಧದ ರೀತಿಯಲ್ಲಿ ಪರಿಗಣಿಸಲಿದೆ ಮತ್ತು ಅತೀ ತೀವ್ರತೆಯಿಂದ ಉತ್ತರಿಸಲಿದೆ.
ಅಮೆರಿಕಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಿದ ಪ್ರಧಾನಿ ಮೋದಿ
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, "ಪಾಕಿಸ್ತಾನದ ವಿಚಾರದಲ್ಲಿ ಮೂರನೇಯವರ ಮಧ್ಯಸ್ಥಿಕೆ ಬೇಕಾಗಿಲ್ಲ, ಪಾಕಿಸ್ತಾನದದೊಂದಿಗೆ ಮಾತುಕತೆ ನಡೆಸಬೇಕಾದರೆ, ಪಾಕಿಸ್ತಾನ ತನ್ನಲ್ಲಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕಟುವಾಗಿ ಹೇಳಿದ್ದಾರೆ.
"ಪಾಕ್ ಆಕ್ರಮಿತ ಕಾಶ್ಮೀರ(PoK) ದಲ್ಲಿರುವ ಅಕ್ರಮ ಪ್ರದೇಶಗಳನ್ನು ಮತ್ತು ಭಯೋತ್ಪಾದಕರ ಹಸ್ತಾಂತರಿಸುವ ಬಗ್ಗೆ ಮಾತ್ರ ಚರ್ಚಿಸುವುದಾದರೆ, ಭಾರತ ಮಾತುಕತೆಗೆ ಸಿದ್ದ, ಅದರ ಹೊರತಾಗಿ ಬೇರೇನೂ ಮಾತಾಡಲು ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಬರಬೇಕು, ಕಾಶ್ಮೀರದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ" ಎಂದು ಖಡಕ್ ಆಗಿ ಮಾತನಾಡಿದ್ದಾರೆ ಎಂದು ಸರಕಾರಿ ಮೂಲಗಳಿಂದ ವರದಿಯಾಗಿದೆ.
ಬಹಳ ಅಚ್ಚರಿಯಂತೆ, "ಆಪರೇಷನ್ ಸಿಂಧೂರ್ ಇನ್ನು ಮುಗಿದ್ದಿಲ್ಲ, ನಾವು ಹಿಂದಿಗಿಂತ ಬಿನ್ನವಾಗಿದ್ದೇವೆ ಮತ್ತು ಹೊಸ ಸ್ಥಿತಿಯಲ್ಲಿದ್ದೇವೆ. ಇದನ್ನು ಜಗತ್ತು ಒಪ್ಪಿಕೊಳ್ಳಬೇಕು ಮತ್ತು ಪಾಕಿಸ್ತಾನ ಕೂಡ ಒಪ್ಪಿಕೊಳ್ಳಬೇಕು. ಇದು ಎಂದಿನಂತೆ ನಡೆಯಲು ಸಾಧ್ಯವಿಲ್ಲ" ಎಂಬ ಎಚ್ಚರಿಕೆಯ ಮಾತನ್ನು ಇಡೀ ವಿಶ್ವಕ್ಕೆ ತಿಳಿಯುವಂತೆ ಗಟ್ಟಿಯಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.