ದೆಹಲಿ, ಮೇ 12: ಇಂದು ರಾತ್ರಿ 8 ಗಂಟೆಗೆ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ 'ಆಪರೇಷನ್ ಸಿಂಧೂರ್' ನಡೆಸಿದ ನಂತರದ ಮೊದಲ ಭಾಷಣವಾಗಿರುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದಮ ವಿರಾಮ ಘೋಷಣೆಯಾದ ಎರಡು ದಿನಗಳ ನಂತರ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೇ 06 ರಂದು ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದು ತದನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಮೊಳಗಿತ್ತು. ಪಾಕಿಸ್ತಾನದ ಸುಮಾರು 8 ವಾಯು ನೆಲೆಗಳನ್ನು ಭಾರತ ದ್ವಂಸಗೊಳಿಸಿತ್ತು ಎಂದು ವರದಿಯಾಗಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನರೇಂದ್ರ ಮೋದಿಯವರು ಬಿಹಾರದ ಚುನಾವಣಾ ಸಂದರ್ಭದಲ್ಲಿ 'ಭಯೋತ್ಪಾದಕರು ಎಲ್ಲಿ ಅಡಗಿದರು ಹುಡುಕಿ ದ್ವಂಸ ಮಾಡುವುದಾಗಿ' ಚುನಾವಣಾ ಭಾಷಣದ ಸಂದರ್ಭದಲ್ಲಿ ದೇಶದ ಜನತೆಗೆ ಭರವಸೆ ನೀಡಿದ್ದರು. ಅದೇ ಪ್ರಕಾರ ಪಾಕಿಸ್ತಾನದಲ್ಲಿ ನೆಲೆಸಿರುವ 9 ಭಯೋತ್ಪಾದಕ ಶಿಬಿರಗಳಿಗೆ ರಾತ್ರೋರಾತ್ರಿ ದಾಳಿ ಮಾಡುವ ಮೂಲಕ ಭಯೋತ್ಪಾದಕರಿಗೆ ತಕ್ಕ ಪಾಠ ಭಾರತ ದೇಶದ ಸೈನಿಕರು ನೀಡಿದ್ದರು.
ಭಾರತದ ಸೈನಿಕರು ನಡೆಸಿದ ದಾಳಿಯಲ್ಲಿ ಸುಮಾರು 100 ಭಯೋತ್ಪಾದಕರು ಸತ್ತಿರುವ ಬಗ್ಗೆ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಭಾರತದ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಭಾರತದ ವಿರುದ್ಧ ದಾಳಿ ಮಾಡಲು ಪ್ರಯತ್ನಪಟ್ಟಿದ್ದರಾದರು ತನ್ನೆಲ್ಲಾ ಪ್ರಯತ್ನಗಳು ವಿಫಲವಾಗಿದ್ದು ನಂತರ ಅಮೆರಿಕದ ಸಹಾಯದಿಂದ ಭಾರತವನ್ನು ಮನವೊಲಿಸಲು ಪ್ರಯತ್ನ ಪಟ್ಟು ಕದನ ವಿರಾಮ ಮಾಡುವಲ್ಲಿ ಯಶಸ್ವಿಯಾಯಿತು.
'ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ' ಎಂದು ಸರಕಾರ ಘೋಷಿಸಿದ ನಂತರ ಇಂದು ಪ್ರಧಾನ ಮೋದಿಯವರ ದೇಶವನ್ನು ಉದ್ದೇಶಿಸಿ ಮೊದಲ ಭಾಷಣ ಬಹಳ ಕುತೂಹಲಕಾರಿಯಾಗಿದ್ದು ದೇಶಕ್ಕೆ ಯಾವ ಸಂದೇಶವನ್ನು ನೀಡಲಿದ್ದಾರೆ ಎಂದು ಜನರು ಕಾತುರದಿಂದ ಕಾಯುವಂತಾಗಿದೆ.