ಬಂಟ್ವಾಳ, ಮೇ 13: ಕೆಳ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿಡು ಗ್ರಾಮದಲ್ಲಿ ಪಂಚಾಯತ್ ಉಪಾಧ್ಯಕ್ಷರೊಬ್ಬರು ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆರೋಪಿ ಪದ್ಮನಾಭ ಸಪಲ್ಯ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 2023 ಸೆಕ್ಷನ್ 79 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಬಿಜೆಪಿ ಪಕ್ಷದಿಂದ ಉಚ್ಚಾಟನೆ
ಇದೀಗ ಸ್ಥಳೀಯ ಗ್ರಾಮಪಂಚಾಯತ್ ಉಪಾಧ್ಯಕ್ಷ, ಆರೋಪಿ ಪದ್ಮನಾಭ ಸಪಲ್ಯರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಪಕ್ಷದ ವರ್ಚಸ್ಸಿಗೆ ಆದ ಹಾನಿಯ ನಂತರ ಬಿಜೆಪಿ ಪುತ್ತೂರು ಗ್ರಾಮೀಣ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರೆಮಾರು, ಪದ್ಮನಾಭ ಸಪಲ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವನದಿಂದ ಉಚ್ಚಾಟಿಸಿರುವುದನ್ನು ದೃಢಪಡಿಸಿದ್ದಾರೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಯನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕ ಆಕ್ರೋಶ ಮತ್ತು ಪಕ್ಷದ ವರ್ಚಸ್ಸಿಗೆ ಆದ ಹಾನಿಯಯನ್ನು ಪರಿಗಣಿಸಿ ಪದ್ಮನಾಭ ಸಪಲ್ಯರವರನ್ನು ಪಕ್ಷದ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರಿಗೆ ನಿರ್ದೇಶನ ನೀಡಿದ್ದರು. ಈ ಕೃತ್ಯ ಖಂಡನೀಯ ಮತ್ತು ಮಹಿಳೆಯರ ಘನತೆಗೆ ಮಾಡಿದ ಅವಮಾನ. ಯಾವುದೇ ಸಂದರ್ಭದಲ್ಲೂ ಬಿಜೆಪಿ ಇಂತಹ ದುಷ್ಕೃತ್ಯವನ್ನು ಸಹಿಸುವುದಿಲ್ಲ ಎಂದು ಅಧ್ಯಕ್ಷ ದಯಾನಂದ ಶೆಟ್ಟಿ ಹೇಳಿದರು.
ಘಟನೆಯ ವಿವರ
ಈ ಘಟನೆ ರಸ್ತೆಗೆ ಸಂಬಂಧಪಟ್ಟದಾಗಿದ್ದು, ತನ್ನ ಮನೆಗೆ ಪ್ರವೇಶವನ್ನು ನಿರ್ಬಂಧಿಸುವ ಗೇಟ್ ಆಳವಡಿಸಿದ್ದಕ್ಕಾಗಿ ಮಹಿಳೆ ಮತ್ತು ಪದ್ಮನಾಭ ಸಪಲ್ಯರವರ ನಡುವೆ ವಾಗ್ವಾದ ನಡೆದಿದೆ. ಮಹಿಳೆ ನಡೆಯುತ್ತಿರುವ ಪರಿಸ್ಥಿತಿಯನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡುತ್ತಿದ್ದಾಗ, ಪದ್ಮನಾಭ ಅವರು ತಾನು ಹಾಕಿದ ಶಾರ್ಟ್ (ಚಡ್ಡಿ) ಅನ್ನು ಕೆಳಗೆ ಎಳೆದುಕೊಂಡು ಮಹಿಳೆ ವಿರುದ್ಧ ಕಿರುಚಾಡುತ್ತಿದ್ದರು. ಈ ಎಲ್ಲಾ ಘಟನೆಗಳು ಮಹಿಳೆಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮಹಿಳೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳೆ ಮುಂದಕ್ಕೆ ಹೇಳುತ್ತಾ, ತಾನು ಹತ್ತಿರದ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಪದ್ಮನಾಭ ಅಶ್ಲೀಲ ವರ್ತನೆಯನ್ನು ತೋರಿಸಿದ್ದಾನೆ ಮತ್ತು ನನಗೆ ಬೆದರಿಕೆ ಮತ್ತು ಅಸಭ್ಯ ರೀಯಿಯಲ್ಲಿ ವರ್ತಿಸಿದ್ದಾನೆ. ಇದು ಉದ್ದೇಶಪೂರ್ವಕವಾಗಿ ಮಾಡಿಕೊಂಡ ಅಪರಾಧ ಮತ್ತು ಆರೋಪಿ ತನ್ನನ್ನು ತಾನು ಬಹಿರಂಗಪಡಿಸಿಕೊಂಡಿದ್ದಾನೆ ಎಂದು ದೂರು ನೀಡಿದ ಮಹಿಳೆ ತಿಳಿಸಿದ್ದಾರೆ.