17 June 2025 | Join group

ಭಯೋತ್ಪಾದನೆ ನಾಯಿಯ ಬಾಲ ಇದ್ದಂತೆ ಮತ್ತು ಅದು ಯಾವತ್ತಿದ್ದರೂ ಸರಿ ಹೋಗಲು ಸಾಧ್ಯವಿಲ್ಲ - ಯೋಗಿ ಆದಿತ್ಯನಾಥ್

  • 15 May 2025 10:37:26 AM

ಉತ್ತರಪ್ರದೇಶ, ಮೇ 15: ಉತ್ತರ ಪ್ರದೇಶದ ಯೋಗಿ ರಾಜ್ಯದಲ್ಲಿ ಅಪರಾಧ ಜಗತ್ತು ಬಾಲ ಬಿಚ್ಚದೆ ಇರಲು ಕಾರಣ ಯೋಗಿ ಸರಕಾರ ಅಪರಾಧಿಗಳ ವಿರುದ್ಧ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು. ನಾವು ಕಠಿಣ ಕ್ರಮ ಕೈಗೊಳಲಿದ್ದೇವೆ ಎಂದು ಹೇಳುವ ಕೆಲ ಮುಖ್ಯಮಂತ್ರಿಗಳು ಆಮೇಲೆ ಕ್ರಮ ಕೈಗೊಳ್ಳದೇ ಸುಮ್ಮನೆ ಇದ್ದ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಯೋಗಿ ಆಳ್ವಿಕೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೆ ತೆಗೆದುಕೊಳ್ಳುವ ಕಠಿಣ ಕ್ರಮದಿಂದ ಉತ್ತರಪ್ರದೇಶದಲ್ಲಿ ಜಂಗಲ್ ರಾಜ್ ಸಮಾಪ್ತಿಯಾಗುತ್ತಿದೆ.

 

ಆತಂಕವಾದಿಗಳು ಮತ್ತು ಅಪರಾಧ ಜಗತ್ತಿನಲ್ಲಿ ತೊಡಗಿಸಿಕೊಂಡವರ ವಿರುದ್ಧ 'ಜೀರೋ ಟಾಲರೆನ್ಸ್ (Zero Tolerance)' ಯೋಗಿಯ ಶೈಲಿ. ಭಯೋತ್ಪಾದಕರನ್ನು ಹೊಡೆರುಳಿಸುವ ಕೆಲಸ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಸಶಕ್ತವಾಗಿ ಯೋಗಿ ನೇತೃತ್ವದಲ್ಲಿ ನಡೆಸುತ್ತಲೆ ಇದೇ.

 

ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ಖ್ಯಾತಿಯ ಯೋಗಿ ಸರಕಾರ ಕಳೆದ 8 ವರ್ಷಗಳಿಂದ ಅಪರಾಧಿಗಳ ಮನೆ ಮೇಲೆ ಬುಲ್ಡೋಜರ್ ಚಲಾವಣೆ ಮಾಡುತ್ತಲೇ ಬಂದಿದ್ದಾರೆ. ಅಪರಾಧಿಗಳು ತನ್ನ ಬಿಲದಿಂದ ಹೊರಬಾರದೆ ಅಪರಾಧ ಜಗತ್ತನ್ನೇ ಬಿಟ್ಟಿರುವ ಉದಾಹರಣೆ ಉತ್ತರಪ್ರದೇಶದಲ್ಲಿ ಬಹಳಷ್ಟಿದೆ .

 

ಕಳೆದ 8 ವರ್ಷದಲ್ಲಿ ಯೋಗಿ ಸರಕಾರ ಹಲವಾರು ಆತಂಕವಾದಿ ಸಂಘಟನೆಗಳನ್ನು ಮತ್ತು ಸಂಘಟನೆಯಲ್ಲಿ ಪಾಲ್ಗೊಂಡವರನ್ನು ಹುಡುಕಿ ಶಿಕ್ಷೆಗೆ ಒಳಪಡಿಸಿರುವ ನಂಬರ್ ಒನ್ ಸರಕಾರವಾಗಿದೆ. ಆತಂಕವಾದಿಗಳು ಮತ್ತು ಅಪರಾಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ವಿರುದ್ಧ ಶೂನ್ಯ ಸಹಿಷ್ಣುತೆಯೇ ಈ ಕಾರ್ಯಾಚರಣೆಯ ಮಂತ್ರ.

 

ನ್ಯೂಸ್18 ಹಿಂದಿ ವಾಹಿನಿಯಲ್ಲಿ ವರದಿಯಾದ ಪ್ರಕಾರ, 2017 ರಿಂದ ಇಲ್ಲಿಯವರೆಗೆ 8 ವರ್ಷದಲ್ಲಿ 142 'ಸ್ಲೀಪಿಂಗ್ ಮಾಡ್ಯೂಲ್' (ಆತಂಕಿಗಳ ಅಡ್ಡೆ) ಗಳನ್ನು ದಮನ ಮಾಡಿದ ಕೀರ್ತಿ ಯೋಗಿ ಸರಕಾರಕ್ಕೆ ಸಲ್ಲುತ್ತದೆ.

 

ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟನಾ ಸಂಧರ್ಭದಲ್ಲಿ ಯೋಗಿ ತನ್ನ ಭಾಷಣದಲ್ಲಿ "ಆತಂಕವಾದ ನಾಯಿಯ ಬಾಲ ಮತ್ತು ಅದು ಯಾವತ್ತಿದ್ದರೂ ಸರಿ ಹೋಗಲು ಸಾಧ್ಯವಿಲ್ಲ, ಪ್ರೀತಿಯ ಭಾಷೆಯನ್ನು ಯಾವತ್ತು ಇವರು ಸಮ್ಮತಿಸುವವರಲ್ಲ. ಅವರಿಗೆ ಅವರ ಭಾಷೆಯಲ್ಲಿ ಉತ್ತರ ನೀಡಲು ನಾವು ಯಾವಾಗಲೂ ಸನ್ನದ್ಧರಾಗಿರಬೇಕು" ಎಂದು ಕಟುವಾದ ಶಬ್ದದಲ್ಲಿ ಮಾತಾಡಿದ್ದಾರೆ.