ಪುತ್ತೂರು, ಮೇ 15: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಮಂಡೂರಿನಲ್ಲಿ ನಡೆದ 13ನೇ ಅಕ್ರಮ - ಸಕ್ರಮ ಬೈಠಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಧರ್ಮ, ದೇವಸ್ಥಾನ ಎಂದು ಭಾಷಣ ಬೀಗುವವರ ವಿರುದ್ಧ ಹರಿಹಾಯ್ದಿದ್ದಾರೆ.
ಭಾಷಣದಲ್ಲಿ ಮಾತನಾಡುತ್ತ, 'ಮುಸ್ಲಿಮರ ಒಂದು ಶೇಕಡಾ ಮತ್ತು ಕ್ರಿಶ್ಚಿಯನ್ ರವರ ಅರ್ಧ ಶೇಕಡಾ ಜಾಮೀನು ಸರಕಾರದ ಅಧೀನದಲ್ಲಿದ್ದರೆ, ಹಿಂದೂಗಳ ಶೇ. 99 ಹಿಂದೂಗಳ ದೇವಸ್ಥಾನ, ಭಜನಾ ಮಂದಿರ, ಕಟ್ಟೆ, ದೈವಸ್ಥಾನ ಎಲ್ಲವೂ ಇರುವುದು ಸರಕಾರಿ ಜಾಗದಲ್ಲಿ. ಇದನ್ನು ಏನಾದರೂ ಮಾಡಿದ್ದಾರಾ ಇವರು? ದೊಡ್ಡ ಭಾಷಣ ಬಿಟ್ಟು, ಭಾಷಣಕ್ಕೆ ಚಪ್ಪಾಳೆ ತೆಗೊಂಡು, ಸೀಯಾಳ ಕುಡಿದು, ಶಾಲು ಹೊದಿಸಿ, ಗಟ್ಟಿ ಊಟ ಮಾಡಿ, ಒಂದು ರೂಪಾಯಿ ಕಾಣಿಕೆ ಕೊಡದೆ ನೇರ ಹೋಗಿಬಿಡುತ್ತಾರೆ. ಅಲ್ಲಿಗೆ ಅವರ ಕೆಲಸ ಮುಗಿಯಿತು ಎಂದು ಗೇಲಿ ಮಾಡಿದ್ದಾರೆ.
ಮುಂದಕ್ಕೆ ಮಾತನಾಡಿ 'ಅವರುಗಳು ಬಹಳಷ್ಟು ಧರ್ಮದ ಬಗ್ಗೆ, ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗುತ್ತಾರಲ್ಲವೇ, ಒಂದು 25 ದೇವಸ್ಥಾನದ ರಶೀದಿ ಮಾಡಿದ್ದೀರಾ ಎಂದು ಕೇಳಿ, ಒಟ್ಟು 5,000 ರೂಪಾಯಿಯಾದರು ರಶೀದಿ ಮಾಡಿದ್ದೀರಾ ಅಂಥ ಜನರು ಕೇಳಬೇಕು' ಎಂದು ಅಶೋಕ್ ರೈ ಹೇಳಿದರು.
'ಈಗ ನಾನು ಇರುವಾಗ ಅವರುಗಳಿಗೆ ಬರಲು ನಾಚಿಗೆಯಾಗುತ್ತದೆ. ಯಾಕೆಂದರೆ ನಾನು ಕಾರ್ಯಕ್ರಮದ ವೇದಿಕೆಯಲ್ಲೇ ಹೇಳುತ್ತೇನೆ, ಮುಂದೆ ಕುಳಿತಿರುವ ಎಲ್ಲರಿಗೂ ಕೂಡ 25,000 ರೂಪಾಯಿ ರಶೀದಿ ಮಾಡಿ ಎಂದು, ಸುಮ್ಮನೆ ಸೀಯಾಳ ಕುಡಿದು ಹೋಗಬೇಡಿ, ರಶೀದಿ ಮಾಡಿಕೊಳ್ಳಿ ಎಂದು ಹೇಳುತ್ತೇನೆ ಆದ್ದರಿಂದ ನಾನು ಹೋಗುವಾಗ ನನನ್ನು ನೋಡಿ ಓಡಿಹೋಗುತ್ತಾರೆ' ಎಂದು ತಿಳಿಸಿದರು.
'ಮೊನ್ನೆ ಮಾಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲೋತ್ಸವಕ್ಕೆ ಹೋಗಿದ್ದೆ, ನಾನು ವೇದಿಕೆಯಲ್ಲೇ ಹೇಳಿದ್ದೆ, ಯಾರೆಲ್ಲ ದೊಡ್ಡ ದೊಡ್ಡ ರಾಜಕೀಯದ ಗೆಸ್ಟ್ ಗಳನ್ನೂ ಹಾಕುತ್ತಾರೆ, ಅವರು 50,000 ರೂಪಾಯಿಯ ಅನ್ನಸಂತರ್ಪಣೆಯ ರಶೀದಿ ಮಾಡಬೇಕು, ಇಲ್ಲದೆ ಹೋದರೆ ಅವರುಗಳನ್ನು ಅಥಿತಿಯಾಗಿ ಹಾಕಬಾರದು. ಬಡತನದ ಜನ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ 5 ,10,20 ಸಾವಿರ ತಿಂಗಳಿಗೆ ಕೂಲಿಗೆ ಹೋಗುವವರು ದೇವಸ್ಥಾನಕ್ಕೆ 5 ಸಾವಿರ, 10 ಸಾವಿರ ರೂಪಾಯಿ ಕೊಡುತ್ತಾರೆ, ಇವರುಗಳು ಯಾಕೆ ಸುಳ್ಳು ಬಿಡಲು ಇಲ್ಲಿ ಬರೋದೇ? ಮೈಕ್ ಸಿಕ್ಕಿದರೆ ಯಾರು ಮಾತನಾಡುತ್ತಾರೆ, ಹೆಂಡತಿ ಜೊತೆ ಜಗಳ ಮಾಡಿ ಗೊತ್ತಿದ್ದರೆ ಸಾಕು ಮೈಕ್ ನಲ್ಲಿ ಮಾತನಾಡಲು. ಮೈಕ್ ನಲ್ಲಿ ಮಾತನಾಡಿದ್ದನ್ನು ಕಾರ್ಯಗತಗೊಳಿಸಬೇಕು ಅವಾಗ ಮಾತ್ರ ಅದಕ್ಕೆ ಗೌರವ ಎಂದು ಹೀಯಾಳಿಸುತ್ತ ಮಾತನಾಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಶೋಕ್ ರೈ ಹಿಂದುಗಳ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಕೆಲವರು ಬರೆದರೆ, ಕೆಲವು ತಿಳಿದವರ ಪ್ರಕಾರ ಅಶೋಕ್ ರೈ ನಿಜವಾದ ಮಾತನ್ನು ಆಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನೂ ದೇವಸ್ಥಾನಗಳು ಸರಕಾರದ ಕೈಯಲ್ಲಿ ಇರೋದು ದುರ್ದೈವ ಎಂದು ಕೆಲ ವ್ಯಕ್ತಿಗಳು ಬೇಸರ ವ್ಯಕಪಡಿಸಿದ್ದಾರೆ.
ಇಂದು ಮುಂದಿನ ದಿನಗಳಲ್ಲಿ ಯಾವ ರೀತಿಗೆ ಪರಿವರ್ತನೆಯಾಗಲಿದೆ ಎಂಬುವುದು ಕಾದುನೋಡಬೇಕಾಗಿದೆ. ಅಶೋಕ್ ರೈ ಕಳೆದ ಉಪ್ಪಿನಂಗಡಿ ಕಂಬಳದಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ 353 ಕೋಟಿ ರಾಜ್ಯ ಸರಕಾರದಿಂದ ಮಂಜೂರಾತಿಯಾಗಿದೆ ಎಂದು ಘೋಷಿಸಿರುತ್ತಾರೆ.