ಉಳ್ಳಾಲ : ಆನ್‌ಲೈನ್ ಅರೆಕಾಲಿಕ ಉದ್ಯೋಗ ಹಗರಣದಲ್ಲಿ 32 ಲಕ್ಷ ರೂ. ಕಳೆದುಕೊಂಡ ಘಟನೆ

  • 07 Apr 2025 11:09:16 AM

ಉಳ್ಳಾಲ, April 07, 2025 : ಟೆಲಿಗ್ರಾಮ್ ಮೂಲಕ ಅರೆಕಾಲಿಕ ಉದ್ಯೋಗ ಅವಕಾಶವನ್ನು ಪರಿಚಯಿಸಿವುದರ ಮೂಲಕ ಸಂಭಾಷಣೆ ನಡೆದು ಈ ಹಗರಣ ನಡೆದಿದೆ. ಫೆಬ್ರವರಿ 26 ರಂದು ಮಾನ್ವಿ ಎಂಬ ಮಹಿಳೆಯಿಂದ ಸಂದೇಶವನ್ನು ಸ್ವೀಕರಿಸಿದರು. ದೂರುದಾರರು ಹೋಟೆಲ್ ರೇಟಿಂಗ್‌ಗಳನ್ನು ನೀಡುವಂತಹ ಸರಳ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಹಣ ಗಳಿಸಬಹುದು ಎಂದು ಮಾನ್ವಿ ಹೇಳಿಕೊಂಡಿದ್ದಾರೆ.

 

ಮೊದಲಿಗೆ, ಮಾರ್ಚ್ 10 ರಂದು, ದೂರುದಾರರು ಅಶೋಕ್ ದತ್ತರ್ವಾಲ್ ಎಂಬವರ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸಿದರು ಮತ್ತು ಕಾರ್ಯವನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರತಿಯಾಗಿ 17,000 ರೂ.ಗಳನ್ನು ಪಡೆಡಿದ್ದರಂತೆ.

 

ಮಾರ್ಚ್ 11 ಮತ್ತು ಏಪ್ರಿಲ್ 2 ರ ನಡುವೆ, ಬಲಿಪಶು ಕಿಶನ್ ಕುಮಾರ್, ರತೀಶ್ ಕೆ, ಪ್ರಹ್ಲಾದ್ ಅಹ್ಯವರ್, ಶಹಜಹಾನ್ ಅಲಿ, ಪಿಯೂಷ್ ಸಂತೋಷ್ ರಾವ್, ಯಶ್ ವೈದ್ಯನಾಥ್ ಕಸರೆ, ರಾಮೇಶ್ವರ್ ಲಾಲ್ ಮತ್ತು ಅನಂತು ಕೃಷ್ಣ ಎಂಬ ವ್ಯಕ್ತಿಗಳಿಗೆ ಸೇರಿದ ಹಲವಾರು ಬ್ಯಾಂಕ್ ಖಾತೆಗಳಿಗೆ ಒಟ್ಟು 32 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಪಾವತಿಸಿದ್ದಾರೆ.

 

ಯಾವುದೇ ರಿಟರ್ನ್ಸ್ ಬರದಿದ್ದಾಗ ಮತ್ತು ಎಲ್ಲಾ ಕರೆ ಸ್ಥಗಿತಗೊಂಡಾಗ, ದೂರುದಾರರು ತಾನು ವಂಚನೆಗೊಳಗಾಗಿದ್ದೇನೆ ಎಂದು ಅರಿತುಕೊಂಡು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

ಆನ್ಲೈನ್ ಫ್ರಾಡ್‌ಗಳನ್ನು ತಡೆಗಟ್ಟಲು ಎಚ್ಚರಿಕೆಯಾಗಿರಿ. ಯಾವುದೇ ಅನಿಸಿಕೆ ಇಲ್ಲದ ಲಿಂಕ್ಸ್ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅನ್ಯರಿಗೆ ಹಂಚಬೇಡಿ. ಸುರಕ್ಷಿತ ಮತ್ತು ಖಾತ್ರಿ ಮಾಡಿರುವ ವೆಬ್‌ಸೈಟ್‌ಗಳ ಮೂಲಕ ಮಾತ್ರ ಆನ್‌ಲೈನ್ ವ್ಯವಹಾರಗಳನ್ನು ಮಾಡಿ.