06 June 2025 | Join group

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರಿಂದ ನಿಟಿಲಾಪುರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗಕ್ಕೆ ಶುಭ ಹಾರೈಕೆ

  • 29 Apr 2025 06:54:32 PM

ಬಂಟ್ವಾಳ, ನಿಟಿಲಾಪುರ, ಏಪ್ರಿಲ್ 29: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗಕ್ಕೆ ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ರವರು ಶುಭಾಶೀರ್ವಾದದ ಸಂದೇಶ ಕಳುಹಿಸಿದ್ದಾರೆ.

 

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಡೆಯಿಂದ ಬಂದಿರುವ ಈ ಶುಭ ಸಂದೇಶದ ಪತ್ರದಲ್ಲಿ, "ದಿನಾಂಕ ಮೇ 02 ರಿಂದ 04, 2025 ರವರೆಗೆ ಕರ್ನಾಟಕದ ಮಂಗಳೂರು ಭಾಗದ ನಿಟಿಲಾಪುರ ಸದಾಶಿವ ಕ್ಷೇತ್ರದಲ್ಲಿ ಕಾಶಿ ಮಠ ವಾರಣಾಶಿಯ ಸಂಯೋಗದಲ್ಲಿ ನಡೆಯಲಿರುವ 'ಅತಿಮಹಾರುದ್ರ' ಯಾಗಕ್ಕೆ ನಿಮ್ಮ ನಿಮಂತ್ರಣ ತಲುಪಿದೆ, ಧನ್ಯವಾದಗಳು" ಎಂದು ಪತ್ರದ ಮೂಲಕ ಸಂದೇಶ ಕಳುಹಿಸಿದ್ದಾರೆ.

 

"ಭಾರತದಲ್ಲಿ ಯಜ್ಞದ ಪರಂಪರೆ ಸಾವಿರಾರು ವರುಷದಾಗಿದೆ. ಯಜ್ಞ ಆತ್ಮ ಶುದ್ದಿ ಮತ್ತು ಪರಿವರ್ತನಾ ಶುದ್ದಿಯ ಸಾರ್ಥಕ ಮಾಧ್ಯಮವಾಗಿದೆ. ಯಜ್ಞ ಜನ ಕಲ್ಯಾಣಕ್ಕೆ ಪ್ರೇರೇಪಣೆ ಕೂಡ ನೀಡುತ್ತದೆ. ಈ ಎಲ್ಲಾ ದೃಷ್ಟಿಕೋನಗಳಿಂದ ಲೋಕ ಕಲ್ಯಾಣಕ್ಕಾಗಿ ಆಯೋಜಿಸಿರುವ 'ಅತಿಮಹಾರುದ್ರ' ಯಾಗ ತುಂಬಾ ಶ್ಲಾಘನೀಯ, ಈ ಕಾರ್ಯಕ್ರಮವು ಅದರ ಪವಿತ್ರ ಉದ್ದೇಶಗಳಿಗೆ ಅನುಗುಣವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ" ಎಂದು ನನಗೆ ವಿಶ್ವಾಸವಿದೆ ಎಂದು ಯೋಗಿಜೀ ತನ್ನ ಸಂದೇಶದ ಪತ್ರದಲ್ಲಿ ನಮೂದಿಸಿದ್ದಾರೆ.

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರದಲ್ಲಿ ಮೇ 02 ರಿಂದ 04 ರವರೆಗೆ 'ಅತಿಮಹಾರುದ್ರ' ಯಾಗ ನಡೆಯಲಿದ್ದು ಸಾವಿರಾರು ಭಕ್ತರ ಆಗಮನವಾಗಲಿದೆ. ಮೂಲಗಳ ಪ್ರಕಾರ ಈ ರೀತಿಯ ಯಾಗ ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ನಡೆಯುವುದು ಎಂದು ಬಲ್ಲವರು ತಿಳಿಸಿದ್ದಾರೆ.