07 June 2025 | Join group

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಮುಖ CCPA ಮೀಟಿಂಗ್ : ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ

  • 30 Apr 2025 10:58:14 AM

CCPA Meeting, April 30 : ಕಳೆದ ವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಆಘಾತಕಾರಿ ಹತ್ಯಾಕಾಂಡದ ನಂತರ, ಇಂದು ಮಹತ್ವರ ಸಿಸಿಪಿಎ ಸಭೆ ನಡೆಯಲಿದೆ.

 

ಇಂದಿನ ಸಿಸಿಪಿಎ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಹಿನ್ನೆಲೆಯಲ್ಲಿ, ಇಂದಿನ CCPA ಸಭೆಯು ಊಹಾಪೋಹಗಳನ್ನು ಹುಟ್ಟುಹಾಕಿದೆ. ಇದರ ಹಿಂದೆ ಸಿಸಿಎಸ್ ಸಭೆಯ ಮೊದಲ ಸುತ್ತಿನ ನಂತರ, ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ ಗಡಿಯನ್ನು ಮುಚ್ಚುವುದು ಮತ್ತು ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಮಿಲಿಟರಿಯೇತರ ಕ್ರಮಗಳನ್ನು ಘೋಷಿಸಿತ್ತು.

 

ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಅಥವಾ ಸಿಸಿಪಿಎಯ ನಿರ್ಣಾಯಕ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ - ಇದು "ಸೂಪರ್ ಕ್ಯಾಬಿನೆಟ್" ಎಂದೂ ಕರೆಯಲ್ಪಡುವ ಸಂಪುಟದ ಅತ್ಯಂತ ಪ್ರಮುಖ ಸಮಿತಿಯಾಗಿದೆ. ಕಳೆದ ವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಆಘಾತಕಾರಿ ಹತ್ಯಾಕಾಂಡದ ನಂತರ, ಅತ್ಯಂತ ಮಹತ್ವಕಾರಿ ಸಿಸಿಪಿಎ ಮೀಟಿಂಗ್ ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದೆ.

 

ನಿನ್ನೆ ಸಂಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರೊಂದಿಗಿನ ನಿರ್ಣಾಯಕ ಸಭೆಯ ನಂತರ, ಪ್ರಧಾನಿ ಮೋದಿ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ "ಸಂಪೂರ್ಣ ಸ್ವಾತಂತ್ರ್ಯ" ನೀಡಿದರು ಎಂದು ಮೂಲಗಳು ತಿಳಿಸಿವೆ.

 

ಸಿಸಿಪಿಎ ಸಭೆಯ ಪ್ರಾಮುಖ್ಯತೆ

CCPA ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳನ್ನು ಪರಿಗಣಿಸುತ್ತದೆ, ವಿಶೇಷವಾಗಿ ಒಮ್ಮತವನ್ನು ರೂಪಿಸುವ ಅಗತ್ಯವಿರುವಾಗ ಈ ಸಭೆಯನ್ನು ಕರೆಯಲಾಗುತ್ತದೆ.

CCPA ದೇಶದ ಪ್ರಮುಖ ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ಪರಿಶೀಲಿಸುತ್ತದೆ ಮತ್ತು ನಿರ್ಧರಿಸುತ್ತದೆ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಸಭೆ ಸೇರುತ್ತದೆ.

CCPA ಸಭೆಯಲ್ಲಿ ಆಂತರಿಕ ಭದ್ರತಾ ವಿಷಯಗಳ ಕುರಿತು ಚರ್ಚೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ವಿದೇಶಾಂಗ ನೀತಿ ವಿಷಯಗಳ ಬಗ್ಗೆಯೂ CCPA ಚರ್ಚಿಸುತ್ತದೆ ಮತ್ತು ನಿರ್ಧರಿಸುತ್ತದೆ.

 

ಇಂದು ನಡೆಯುವ CCPA ಸಭೆಯ ಸದಸ್ಯರುಗಳು

CCPA ಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ಸಂಚಾರ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವೆ ಪಿಯೂಷ್ ಗೋಯಲ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಎಂಎಸ್‌ಎಂಇ ಸಚಿವ ಜಿತನ್ ರಾಮ್ ಮಾಂಝಿ, ಹಡಗು ಸಚಿವ ಸರ್ಬಾನಂದ ಸೋನೋವಾಲ್, ಪರಿಸರ ಸಚಿವ ಭೂಪೇಂದ್ರ ಯಾದವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ, ಸಂಸದೀಯ ವ್ಯವಹಾರ ಸಚಿವೆ ಕಿರಣ್ ರಿಜಿಜು ಮತ್ತು ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ ಅವರುಗಳು ಸೇರಿದ್ದಾರೆ.

 

ಮಿತ್ರ ಪಕ್ಷಗಳ ಕ್ಯಾಬಿನೆಟ್ ಮಂತ್ರಿಗಳಿಗೂ ಸಿಸಿಪಿಎಯಲ್ಲಿ ಸ್ಥಾನ ನೀಡಲಾಗಿದೆ. ಇಂದಿನ ಸಿಸಿಪಿಎ ಸಭೆಯ ನಂತರ ಭಾರತದ ಮುಂದಿನ ನಡೆ ತಿಳಿಯಲಿದೆ.