ಧರ್ಮಸ್ಥಳ: ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣದ ಸಮಗ್ರ ತನಿಖೆ ನಡೆಸಲು, ಎಸ್ಐಟಿ ಮಂಗಳೂರಿನಲ್ಲಿ ಪ್ರತ್ಯೇಕ ಕಚೇರಿಯನ್ನು ರಚಿಸಿದೆ.
ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸೆಕ್ಷನ್ 311(ಎ) ಅಡಿಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 39/2025 ಸಂಬಂಧಿಸಿದ ಅಪರಾಧ ಪ್ರಕರಣವನ್ನು ತನಿಖೆ ನಡೆಸುವ ಸಲುವಾಗಿ ಮಂಗಳೂರಿನಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕೃತ ಕಚೇರಿಯನ್ನು ಸ್ಥಾಪಿಸಿದೆ.
ಈ ಪ್ರಕರಣದ ಬಗ್ಗೆ ಎಸ್ಐಟಿ ಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು, ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
ಕಚೇರಿ ವಿಳಾಸ,
ನಿರೀಕ್ಷಣಾ ಮಂದಿರ
ಮಲ್ಲಿಕಟ್ಟೆ, ಕದ್ರಿ
ಮಂಗಳೂರು ನಗರ, ದ.ಕ ಜಿಲ್ಲೆ
ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ
ದೂರವಾಣಿ ಸಂಖ್ಯೆ: 0824-2005301
ಮೊಬೈಲ್ ಸಂಖ್ಯೆ: 8277986369
ವಾಟ್ಸಾಪ್ ಸಂಖ್ಯೆ: 8277986369
ಈ-ಮೇಲ್ ವಿಳಾಸ: sitdps@ksp.gov.in
ಈ ಮೇಲಿನ ಸಂಪರ್ಕ ವಿವರಗಳಿಗೆ ಸಂಪರ್ಕಿಸುವ ಮೂಲಕ ಮಾಹಿತಿ ನೀಡಬಹುದಾಗಿದೆ.