16 September 2025 | Join group

ಮದ್ದೂರು ಗಣೇಶ ಮೆರವಣಿಗೆ ಕಲ್ಲುತೂರಾಟ: ಕಿಂಗ್ ಪಿನ್ ಇರ್ಫಾನ್ ಪೊಲೀಸರ ವಶಕ್ಕೆ

  • 09 Sep 2025 11:27:41 AM

ಮದ್ದೂರು: ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಪ್ರಕರಣದ ಮುಖ್ಯ ಸುಳಿವುಧಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಮೆರವಣಿಗೆಯ ವೇಳೆ ಯುವಕರು ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾಗ, ಮಸೀದಿ ಹತ್ತಿರಕ್ಕೆ ತಲುಪುತ್ತಿದ್ದಂತೆ ಚನ್ನಪಟ್ಟಣದ ಇರ್ಫಾನ್ ಹಾಗೂ ಅವನ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

 

ಮಸೀದಿಯ ಹಿಂಭಾಗದಿಂದ ಕಲ್ಲು ಎಸೆಯಲ್ಪಟ್ಟ ಪರಿಣಾಮ ಸ್ಥಳದಲ್ಲಿ ಆತಂಕ ಉಂಟಾಗಿ ಗಲಭೆ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಇರ್ಫಾನ್ ಹಾಗೂ ಅವನ ಗುಂಪು ಅಲ್ಲಿಂದ ಪರಾರಿಯಾಗಿದ್ದರು.

 

ಘಟನೆ ನಡೆದ ಮರುದಿನ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಬಂದಾಗ, ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಯುವತಿಯೊಬ್ಬರ ಮೇಲೆ ಲಾಠಿ ಬೀಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಈ ಪ್ರಕರಣದ ಹಿನ್ನೆಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಹಬ್ಬಗಳ ಸಂದರ್ಭದಲ್ಲಿ ಪ್ರತಿವರ್ಷ ಈ ರೀತಿಯ ಘಟನೆಗಳು ನಡೆಯುತ್ತಿರುವುದನ್ನು ಖಂಡಿಸಿದ್ದಾರೆ.