04 September 2026 |

ದೇಶ ಸೇವೆಯಿಂದ ರಾಮ ಸೇವೆಗೆ: ರಾಮ ಮಂದಿರದ ಹೊಸ CEO ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ

  • 03 Sep 2026 04:07:21 PM

ಉತ್ತರಪ್ರದೇಶ: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ CEOಆಗಿ ನೇಮಕ ಮಾಡಲಾಗಿದೆ. ಸುಮಾರು 5,500ಕ್ಕೂ ಹೆಚ್ಚು ಅರ್ಜಿದಾರರ ಪೈಕಿ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ. 

 

ಭಾರತೀಯ ವಾಯುಪಡೆಯಲ್ಲಿ ಸುಮಾರು 43 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಿಶ್ರಾ, ಇತ್ತೀಚೆಗೆ ವೆಸ್ಟರ್ನ್ ಏರ್ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. 2026ರ ಏಪ್ರಿಲ್‌ನಲ್ಲಿ ಅವರು ನಿವೃತ್ತರಾಗಿದ್ದರು. 

 

ಹೊಸ ಜವಾಬ್ದಾರಿಯ ಬಗ್ಗೆ ಮಾತನಾಡಿದ ಅವರು, “ಜೀವನದಲ್ಲಿ ಎರಡು ಬಾರಿ ಪ್ರಮುಖ ಜವಾಬ್ದಾರಿ ನಿರ್ವಹಿಸುವ ಅವಕಾಶ ಸಿಕ್ಕಿದೆ. ಒಮ್ಮೆ ದೇಶ ಸೇವೆ ಮಾಡಲು, ಈಗ ಶ್ರೀರಾಮ, ರಾಮ ಮಂದಿರ ಮತ್ತು ರಾಮಭಕ್ತರ ಸೇವೆ ಮಾಡಲು. ಇದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ” ಎಂದು ಹೇಳಿದ್ದಾರೆ. 

 

ಮೊದಲು ಟ್ರಸ್ಟ್‌ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು, ಬಳಿಕ ಮುಂದಿನ ಕಾರ್ಯಯೋಜನೆ ರೂಪಿಸುವುದಾಗಿ ಮಿಶ್ರಾ ತಿಳಿಸಿದ್ದಾರೆ.