ಬಂಟ್ವಾಳ, ಮಾ.02 : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ದಾಸಕೋಡಿ ಹತ್ತಿರ ನ್ಯಾಷನಲ್ ಹೈವೇ 75 ರ ಇಕ್ಕೆಲಗಳಲ್ಲಿ ಎಸೆಯುತ್ತಿದ್ದ ಪ್ರಾಣಿಗಳ ತ್ಯಾಜ್ಯ ಮತ್ತು ಇನ್ನಿತರ ತ್ಯಾಜಗಳನ್ನು ಬಾಳ್ತಿಲ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ತಾರೀಕು 26 ಫೆಬ್ರವರಿ 2025 ರಂದು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದರು. ಈ ತಕ್ಷಣದ ಕ್ರಮ ಕೈಗೊಂಡ ಸಂಬಂಧಿತ ಇಲಾಖೆಗೆ ಸ್ಥಳೀಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ವರದಿಯನ್ನು ಸುಧಾವಾಣಿ ಇತ್ತೀಚಿಗೆ ವಿವರಗಳೊಂದಿಗೆ ವರದಿ ಮಾಡಿತ್ತು. ಬಾಳ್ತಿಲ ಗ್ರಾಮ ಪಂಚಾಯತಿನ ತಕ್ಷಣ ಕ್ರಮದಿಂದ ಇಲ್ಲಿನ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ದೊಡ್ಡ ಸಹಾಯವಾಗಿದೆ.
ಆದರೂ, ಈ ಸಮಸ್ಯೆಗಳನ್ನು ಭವಿಷ್ಯದಲ್ಲಿ ಮತ್ತೆ ಸಂಭವಿಸದಂತೆ ಮಾಡಲು ಸಾರ್ವಜನಿಕರು ಕೆಲವು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಮಾಲಿನ್ಯವು ಮತ್ತೊಮ್ಮೆ ಮುಂದುವರಿಯದಂತೆ ಸಿಸಿಟಿವಿ ಅಥವಾ ಇತರ ನಿಗಾ ವ್ಯವಸ್ಥೆಗಳ ಅಳವಡಿಕೆ ಮತ್ತು ನಿಗಾ ವ್ಯವಸ್ಥೆಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಮಾಲಿನ್ಯ ಸಮಸ್ಯೆಗಳನ್ನು ಪೂರ್ಣವಾಗಿ ತಡೆಯಲು ಮತ್ತು ಪರಿಸರವನ್ನು ಸ್ವಚ್ಛ ಉಳಿಸಲು ಸಂಬಂಧಿತ ಅಧಿಕಾರಿಗಳು ಈ ರೀತಿಯ ಕೆಲಸ ಮಾಡುವವರಿಗೆ ಮನವರಿಕೆ ಮಾಡುವ ಮೂಲಕ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಪುನಃ ಸಂಭವಿಸದಂತೆ ದೃಢವಾದ ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯರು ಬೇಡಿಕೆ ಇಡುತ್ತಿದ್ದಾರೆ. ಇದೇ ರೀತಿ ಪುನರಾವರ್ತನೆಯಾದಲ್ಲಿ ಅಂಥವರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಸಂಬಂಧಿತ ಇಲಾಖೆಗೆ ಈ ಮೂಲಕ ಮನವಿ ಮಾಡುತ್ತಿದ್ದಾರೆ.