06 June 2025 | Join group

ಬಂಟ್ವಾಳ ತಾಲೂಕು ವಿಟ್ಲದ ಕಸಬಾ ಗ್ರಾಮದಲ್ಲಿ ಪತ್ತೆಯಾದ ಅತೀ ಪುರಾಣ ತುಳು ಲಿಪಿಯ ಶಾಸನ – ಐತಿಹಾಸಿಕ ಮಹತ್ವ

  • 02 Mar 2025 04:30:48 PM

ಬಂಟ್ವಾಳ, ಮಾರ್ಚ್ 02, 2025 : ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಮತ್ತು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಲು ಪ್ರಯತ್ನ ಮಾಡುವ ತುಳುವರಿಗೆ ಮತ್ತೊಂದು ಅವಕಾಶ ದೊರಕಿದೆ. ಬಹಳ ಪುರಾಣ ಪುರಾವೆ ದೊರೆಕಿರುವುದು ತಮ್ಮ ಹೋರಾಟಕ್ಕೆ ಇನ್ನಷ್ಟು ಪುಷ್ಟಿ ನೀಡಲಿದೆ.

 

ಹೌದು, ಇತ್ತೀಚಿಗೆ ಬಂಟ್ವಾಳ ತಾಲೂಕಿನ ವಿಟ್ಲದ ಕಸಬಾ ಗ್ರಾಮದಲ್ಲಿರುವ ಶ್ರೀ ಗಣಪತಿ ಲಕ್ಸ್ಮಿನಾರಾಯಣ ಉಮಾಮಹೇಶ್ವರಿ ಮಠದ ನವೀಕರಣ ಕಾರ್ಯಗಳ ಸಂದರ್ಭದಲ್ಲಿ ತುಳು ಲಿಪಿಯಲ್ಲಿ ಕೆತ್ತಲಾದ ಎರಡು ಗ್ರಾನೈಟ್ ಕಲ್ಲುಗಳ ಶಾಸನಗಳು ಪತ್ತೆಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ತುಳು ಭಾಷೆಯ ಲಿಪಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಇದೊಂದು ಪ್ರಬಲ ಪುರಾವೆಯಾಗಬಹುದು.

 

ಈ ಬರಹಗಳು 1879ನೇ ಕ್ರಿಸ್ತ ಶತಮಾನಕ್ಕೆ ಸೇರಿರುವುದಾಗಿ ಮತ್ತು ಒಂದರಲ್ಲಿ 11 ಸಾಲು ಹಾಗೂ ಮತ್ತೊಂದರಲ್ಲಿ 4 ಸಾಲುಗಳ ಲಿಪಿ ಬರೆದಿದೆ ಎಂದು ವಿದ್ವಾಂಸರು ತಿಳಿಸಿದ್ದಾರೆ. ಶಾಸನವು "ಸ್ವಸ್ತಿಶ್ರೀ" ಎಂಬ ಶುಭಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಈ ತುಳು ಶಾಸನಗಳು ದೇವತೆಗಳ ಪ್ರತಿಷ್ಠಾಪನೆ, ದೇವಸ್ಥಾನದ ಸಂಪ್ರದಾಯಗಳು, ಹಾಗೂ ದೈನಂದಿನ ಪೂಜಾ ಕಾರ್ಯಗಳಿಗೆ ಸಂಬಂಧಿಸಿದ ದಾನಗಳ ವಿವರಗಳನ್ನು ಒಳಗೊಂಡಿವೆ.

 

ಈ ಪತ್ತೆ ತುಳುನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಅಧಿಕೃತವಾಗಿ ದಾಖಲಾಗದ ಇತಿಹಾಸದ ಬಗ್ಗೆ ಹೊಸ ಅಧ್ಯಯನಕ್ಕೆ ದಾರಿ ಮಾಡಿಕೊಡಬಹುದು. 1879ರಷ್ಟು ಹಳೆಯದು ಎಂಬ ದೃಢೀಕರಣ ದೊರೆತರೆ, ಇದು ಕನ್ನಡನಾಡಿನ ಪ್ರಮುಖ ತುಳು ಲಿಪಿ ಶಾಸನಗಳಲ್ಲಿ ಒಂದಾಗಬಹುದು.ತುಳು ಭಾಷೆಯು ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡು ಜಿಲ್ಲೆಗಳ ಸ್ಥಳೀಯ ಜನರು ಮಾತನಾಡುವ ಪ್ರಮುಖ ಭಾಷೆಯಾಗಿದ್ದು, ಇದಕ್ಕೆ ಪ್ರಾಚೀನ ಲಿಪಿಯನ್ನೂ ಹೊಂದಿದೆ. ಆದರೆ ತುಳು ಲಿಪಿ ಬಹುತೇಕ ಬಳಕೆಯಿಂದ ಮರೆಯಾಗಿದ್ದರಿಂದ, ಇಂತಹ ಹೊಸ ಪತ್ತೆಗಳು ಭಾಷೆಯ ಪುನರುಜ್ಜೀವನಕ್ಕೆ ಮಹತ್ವವನ್ನು ಹೊತ್ತು ತರುತ್ತವೆ.

 

ಇದು ತುಳುನಾಡಿನ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ಹೊಸ ಅಧ್ಯಯನಕ್ಕೆ ದಾರಿ ಮಾಡಿಕೊಡುವ ಮಹತ್ವದ ಬೆಳವಣಿಗೆಯಾಗಿದೆ. ಇಂತಹ ಪತ್ತೆಗಳು ತುಳು ಭಾಷಾ ಸಂಸ್ಕೃತಿಯ ಪುನರುಜ್ಜೀವನಕ್ಕೆ ಮತ್ತು ಅದನ್ನು ಮುಂದಿನ ತಲೆಮಾರಿಗೆ ಅರ್ಥಮಾಡಿಕೊಡುವತ್ತ ಮಹತ್ತರವಾದ ಹೆಜ್ಜೆಯಾಗಬಹುದು.  

 

ವಿಟ್ಲದ ಬಕ್ರಬೆಲಿನ ನೇತ್ರ ಕೆರೆಯ ಮಠದಲ್ಲಿ ಶ್ರೀ ಗಣಪತಿ ಲಕ್ಷ್ಮೀನಾರಾಯಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಕುಕ್ಕಿಲದ ಪುಟ್ಟಣ್ಣ ಭಟ್ಟರ ಮಗ ಈಶ್ವರ ಭಟ್ಟರು ನಗದು ಸಹಿತ ದಾನವನ್ನು ನೀಡಿದ್ದಾರೆ ಎಂದು ನಮೂದಿಸಲಾಗಿದೆ. ಕುಕ್ಕೆಸುಬ್ರಮಣ್ಯ ಶ್ರೀನಿಕೇತನ ವಸ್ತುಸಂಗ್ರಾಲಯ ಮತ್ತು ಸಂಶೋಧನಾ ಕೇಂದ್ರ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ಇತಿಹಾಸ ಮತ್ತು ಪುರುತ್ವತ್ವ ಸಂಶೋಧನಾಕಾರ ಮಂಜುನಾಥ ನಂದಳಿಕೆ ಶಿಲೆಯ ಪರಿಶೀಲನೆ ನಡೆಸಿದರು.

 

ದೇವಸ್ತಾನ ಆಡಳಿತ ಮಂಡಳಿಯ ಎನ್. ಶಂಕರನಾರಾಯಣ ಭಟ್, ಡಾ. ಎನ್. ತಿರುಮಲೇಶ್ವರ ಭಟ್, ಎನ್. ಮಹೇಶ್, ಗಣೇಶ್ ಭಟ್, ಎನ್, ರವೀಶ್, ಶರ್ಮಿಳಾ ಯು ನಾರಾಯಣ ಭಟ್, ಮಂಜುಳಗಿರಿ ಈಶ್ವರ್ ಭಟ್ ಮತ್ತಿತರು ಉಪಸ್ಥಿತರಿದ್ದರು.