15 June 2025 | Join group

ದಿಗಂತ್ ನಾಪತ್ತೆ ಪ್ರಕರಣ : ಹಿಂದೂ ಜಾಗರಣ ವೇದಿಕೆಯಿಂದ ಫರಂಗಿಪೇಟೆ ಚಲೋ ರ್‍ಯಾಲಿ

  • 08 Mar 2025 12:00:49 PM

ಬಂಟ್ವಾಳ, ಮಾರ್ಚ್ 08, 2025 : ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಾರ್ಚ್ 10,2025 ರಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಪರಂಗಿಫೇಟೆ ಚಲೋ ಎನ್ನುವ  ರ್‍ಯಾಲಿಯನ್ನು ಹಮ್ಮಿಕೊಂಡಿದ್ದಾರೆ.

 

ಬೆಳಿಗ್ಗೆ 8:30ಕ್ಕೆ ಸರಿಯಾಗಿ ಕಡೆಕೋಲಿ ದ್ವಾರದಿಂದ ಫರಂಗಿಪೇಟೆ ಮತ್ತು ಅರ್ಕುಳ ದ್ವಾರದಿಂದ ಫರಂಗಿಪೇಟೆಯವರೆಗೆ ಈ ರ್‍ಯಾಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ. ದಿಗಂತ್ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದು, ಕಳೆದ 10 ದಿನಗಳಲ್ಲಿ ಆದಷ್ಟು ಬೇಗ ಹುಡುಕಿ ಕೊಡಬೇಕಾಗಿ ಹಲವಾರು ಒತ್ತಡಗಳನ್ನು ಪೊಲೀಸ್ ಇಲಾಖೆಗೆ ಮತ್ತು ಸರಕಾರಕ್ಕೆ ಹಾಕಲಾಗಿದೆ. ಆದರೆ ಇನ್ನೂ ಹುಡುಕಲು ಸಾಧ್ಯವಾಗದೆ ಇರುವುದು ಬಹಳಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

 

ಹಿಂದೂ ಹಿತರಕ್ಷಣಾ ವೇದಿಕೆ ಬಂಟ್ವಾಳ ಇದರಿಂದ ಫರಂಗಿಪೇಟೆ ಚಲೋ ಬಗ್ಗೆ ಸೋಶಿಯಲ್ ಮಿಡಿಯಾ ಮುಖಾಂತರ ದಿಗಂತ್ ನಮ್ಮ ಮನೆಯ ಮಗ, ಮನೆಯ ಮಗ ಮರಳಿ ಮನೆ ಸೇರುವವರೆಗೂ ವಿರಮಿಸುವ ಮಾತೆ ಇಲ್ಲ ಎಂದು ನಮೂದಿಸಲಾಗಿದ್ದು, ತಮ್ಮೆಲ್ಲರ ಆಗಮನವನ್ನು ಬಯಸುವ ಎಂದು ಆಮಂತ್ರಿಸಲಾಗಿದೆ.