ದಕ್ಷಿಣ ಕನ್ನಡ, ಮಾರ್ಚ್ 12, 2025 : ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇದರಿಂದ ಬಿಸಿಲು ಬೇಗೆಗೆ ದೇಹದ ಬಗ್ಗೆ ಕಾಳಜಿ ವಹಿಸಲು ಮಾರ್ಗಸೂಚಿ ಜಾರಿಯನ್ನು ಜಾರಿಗೊಳಿಸಿದೆ.
ಕರಾವಳಿ ಭಾಗದಲ್ಲಿ ಈ ವರ್ಷ ಸುಡುವ ಬಿಸಿಲಿನಿಂದ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ 41 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕರಾವಳಿ ಜನರು ತತ್ತರಿಸಿ ಹೋಗಿದ್ದು, ಇನ್ನೂ ಮುಂದುವರಿದರೆ ಜನರು ಬಹಳಷ್ಟು ಕಷ್ಟ ಅನುಭವಿಸಬೇಕಾಗಬಹುದು. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಜನರು ಸುಡು ಬಿಸಿಲಿನಿಂದ ಪಾರಾಗಲು ಪಾಲಿಸಬೇಕಾದ ನಿಯಮಗಳನ್ನು ಫ್ಲೈಯರ್ ಗಳ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ.
ಬಿಸಿಲ ಬೇಗೆಗೆ ದೇಹದ ಬಗೆಗಿರಲಿ ವಿಶೇಷ ಕಾಳಜಿ :
ಬೇಸಿಗೆಯಲ್ಲಿ ಮಕ್ಕಳಿಗೆ ಬೇಕು ವಿಶೇಷ ಕಾಳಜಿ :
ಸಕತ್ ಸೆಕೆ ಇರಲಿ ಸುರಕ್ಷತೆ :
ದಯಮಾಡಿ ಈ ಎಲ್ಲಾ ನಿಯಮಗಳನ್ನು ತಪ್ಪದೆ ಪಾಲಿಸಿ. ನಿಮ್ಮ ದೇಹ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ. ನೀವು ಪಾಲಿಸಿ ಹಾಗೂ ನಿಮ್ಮ ನೆರೆಹೊರೆಯವರಿಗೆ ಮತ್ತು ಸಂಬಧಿಕರಿಗೂ ಈ ವಿಷಯ ತಿಳಿಸಿ ಮತ್ತು ಎಲ್ಲರಿಗೂ ಅರಿವು ಮೂಡಿಸಿ ಎನ್ನುವುದೇ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ದ್ಯೇಯ.