15 June 2025 | Join group

ನಟಿ ಕತ್ರಿನಾ ಕೈಫ್ ಕುಕ್ಕೆ ಶ್ರೀ ಸುಬ್ರಮಣ್ಯ ದೇವರ ದರ್ಶನ ಮಾಡಿದ ಉದ್ದೇಶವೇನು ?

  • 12 Mar 2025 07:51:15 PM

ಸುಬ್ರಮಣ್ಯ, ಮಾರ್ಚ್ 12, 2025 : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ ನೀಡಿ ದೇವರ ದರ್ಶನ ಪಡೆದಿರುವುದು ಬಹಳ ಕುತೂಹಲ ಮೂಡಿಸಿದೆ. ಮಾರ್ಚ್ 11 ರಂದು ಕತ್ರಿನಾ ಕೈಫ್ ತನ್ನ ಸ್ನೇಹಿತರೊಂದಿಗೆ ಕುಕ್ಕೆ ಶ್ರೀ ಸುಬ್ರಮಣ್ಯದಲ್ಲಿ ಸರ್ಪ ಸಂಸ್ಕಾರ ಮಾಡಿಸಿದ್ದರು. 

 

ತನ್ನ ಸರಳ ಉಡುಗೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಕತ್ರಿನಾ ಯಾವುದೇ ವಿಐಪಿ ಸೌಲಭ್ಯವನ್ನು ಕೇಳಲಿಲ್ಲ. ದೇವರ ದರ್ಶನ ಮಾಡುವಾಗ ಯಾವುದೇ ರೀತಿಯ ಗಮನ ಭಂಗವಾಗದಂತೆ ನೋಡಿಕೊಂಡ ಕತ್ರಿನಾ, ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠ ಪೂಜಾ ನೆರವೇರಿಸಿದರು.

 

ವೃತ್ತಿ ಜೀವನ, ಸಾಂಸಾರಿಕ ಜೀವನ, ಉತ್ತಮ ಅರೋಗ್ಯ, ಮನಶಾಂತಿಗಾಗಿ ಪೂಜೆಗಳನ್ನು ನಡೆಸಿದ್ದಾರೆಂದು ತಿಳಿದು ಬಂದಿದೆ. ಮಾಧ್ಯಮದವರ ಮತ್ತು ಇತರ ಭಕ್ತಾದಿಗಳ ಕಣ್ಣಿಗೆ ಬೀಳದಂತೆ ತನ್ನ ಎಲ್ಲಾ  ಪೂಜಾ ಕಾರ್ಯವಿಧಾನಗಳನ್ನು ಸಂಪೂರ್ಣಗೊಳಿಸಿದರು.

 

ಏನಿದೆ ಕತ್ರಿನಾ ಕೈಫ್ ಶ್ರೀ ಸುಬ್ರಮಣ್ಯ ಸಾನಿಧ್ಯಕ್ಕೆ ಭೇಟಿ ಕೊಡುವುದರ ಉದ್ದೇಶ ?

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ಮೂರು ವರುಷ ಕಳೆದಿದೆ. ಸೂತ್ರಗಳ ಪ್ರಕಾರ ಮಕ್ಕಳಾಗದ ಕಾರಣ ಕತ್ರಿನಾ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದು ನಾಗ ದೇವರ ಪೂಜಾ ವಿಧಿವಿಧಾನಗಳನ್ನು ನಡೆಸಿದ್ದಾರೆಂದು ಹೇಳಲಾಗಿದೆ. ಮಕ್ಕಳಾಗದವರು ಮತ್ತು ಮದುವೆಯಾಗದವರು ಸಾಮಾನ್ಯವಾಗಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ಈ ರೀತಿಯ ಪೂಜಾ ವಿಧಾನಗಳನ್ನು ಹೆಚ್ಚಾಗಿ ನಡೆಸುತ್ತಾರೆ.

ಅದಲ್ಲದೆ ಹಲವಾರು ಭಕ್ತಾದಿಗಳು ತಮ್ಮ ಉತ್ತಮ ಅರೋಗ್ಯ, ನೆಮ್ಮದಿ ಸಂಪತ್ತು ಮತ್ತು ಇನ್ನಿತರ ಜೀವನದಲ್ಲಿ ಅಭಿವೃದ್ಧಿ ಸಿಗಲು ನಾಗ ದೇವರಿಗೆ ನಾಗ ಪ್ರತಿಷ್ಠ ಮತ್ತು ಸರ್ಪ ಸಂಸ್ಕಾರ ನಡೆಸುತ್ತಾರೆ. ಒಂದು ವೇಳೆ ಮರಣ ಹೊಂದಿದ ನಾಗರ ಹಾವನ್ನು ನೋಡಿದ್ದರೆ ಅಥವಾ ತಪ್ಪಾಗಿ ನಾಗರ ಹಾವಿನ ಸಾವಿಗೆ ಕಾರಣವಾಗಿದ್ದರೆ ಹಿಂದೂ ಶಾಸ್ತ್ರದ ಪ್ರಕಾರ ಸರ್ಪ ಸಂಸ್ಕಾರ ನಡೆಸಿ ದೇವರ ಕೃಪೆಗೆ ಪಾತ್ರವಾದರೆ ಮಾತ್ರ ಅದರ ದೋಷ ಬಿಡುಗಡೆಯಾಗುತ್ತದೆ ಎನ್ನುವ ಬಲವಾದ ನಂಬಿಕೆ ಇದೆ. 

 

ಮಹಾಕುಂಭ ಮೇಳಕ್ಕೆ ಭೇಟಿ ಕೊಟ್ಟು ಮಿಂದೆದ್ದ ಕತ್ರಿನಾ :

ಕತ್ರಿನಾ ಹಿಂದೂ ನಟನನ್ನು ಮದುವೆಯಾದ ನಂತರ ಹಿಂದೂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕಳೆದ ತಿಂಗಳು ಪ್ರಯಾಗರಾಜ್ ನಡೆದ ಮಹಾ ಕುಂಭ ಮೇಳದಲ್ಲಿ ಕೂಡ ಕತ್ರಿನಾ ತನ್ನ ಅತ್ತೆಯ ಜೊತೆಗೆ ತೆರಳಿ ಗಂಗಾ ಸ್ನಾನ ಮಾಡಿರುತ್ತಾರೆ. ಈಗ ಸುಬ್ರಮಣ್ಯ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ದೇವರ ಬಗ್ಗೆ ಇರುವ ಭಕ್ತಿ ಶ್ರದ್ದೆಯನ್ನು ತೋರಿಸಿಕೊಟ್ಟಿದ್ದಾರೆ.