21ನೇ ವರ್ಷದ ಪ್ರತಿಷ್ಠಿತ ಮಿಯ್ಯಾರು ಲವ ಕುಶ ಜೋಡುಕರೆ ಕಂಬಳ ಕಾರ್ಕಳ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ ರವರ ನೇತೃತ್ವದಲ್ಲಿ ದಿನಾಂಕ 15ನೇ ಮಾರ್ಚ್ 2025 ರಂದು ಶನಿವಾರ ಬೆಳಗ್ಗೆ 8.00 ಗಂಟೆಗೆ ಮಿಯ್ಯಾರಿನಲ್ಲಿ ನಡೆಯಲಿದೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತಿದ್ದ ಈ ಕಂಬಳ ಈ ವರ್ಷ ಮಿಯ್ಯಾರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಅತೀ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.
ಸುಮಾರು 250 ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, 24 ಗಂಟೆಯ ಒಳಗೆ ಕಂಬಳ ಮುಗಿಸುವ ಯೋಜನೆಯನ್ನು ಸಮಿತಿ ಹಾಕಿಕೊಂಡಿದ್ದಾರೆ. ನಾಲ್ವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು, ರಾಜ್ಯದ ಕೆಲ ಸಚಿವರು, ಮಾಜಿ ಮತ್ತು ಹಾಲಿ ರಾಜಕೀಯ ಮುಖಂಡರು ಮತ್ತು ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.