ಭಕ್ತಾದಿಗಳಿಗೆ ಇದೊಂದು ಸಂತಸದ ಸುದ್ದಿ. ಇನ್ನು ಮುಂದೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ, ವೆಬ್ ಸೈಟ್ ಮೂಲಕ ಪ್ರಸಾದವನ್ನು ಮನೆಗೆ ತರಿಸಬಹುದಾದ ಸದಾವಕಾಶ. ಧಾರ್ಮಿಕ ದತ್ತಿ ಇಲಾಖೆಯು ಪ್ರಸಿದ್ಧ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ 14 ಪ್ರಸಿದ್ಧ ದೇವಾಲಯಗಲ್ಲಿ ಇ-ಪ್ರಸಾದ ಸೇವೆ ಆರಂಭಿಸಿದೆ.
ಅಂಗವಿಕಲರು, ವಯಸ್ಸಾದವರು, ಒಬ್ಬಂಟಿಯಾಗಿರುವವರು ಸೇರಿದಂತೆ ಹಲವರಿಗೆ ದೇವಾಲಯಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇ-ಪ್ರಸಾದವನ್ನು ಪಡೆಯಬಹುದಾಗಿದೆ. ಮನೆಯಲ್ಲಿ ಶುಭ ಸಮಾರಂಭಗಳಿರುವಾಗ ದೇವರ ಪ್ರಸಾದವನ್ನು ಮನೆಗೆ ತರಿಸಿಕೊಂಡು ಪೂಜೆ ಮಾಡುವ ಅವಕಾಶವನ್ನು ಧಾರ್ಮಿಕ ದತ್ತಿ ಇಲಾಖೆ ಸಾರ್ವಜನಿಕರಿಗೆ ಕಲ್ಪಿಸಿದೆ.
ನೋ ಲಾಸ್ ನೋ ಪ್ರಾಫಿಟ್ನಲ್ಲಿ ರೂ. 100 ರಿಂದ 200 ರೂ. ಗಳಲ್ಲಿ ಸೇವೆ ನೀಡಲಾಗುವುದು. ಈಗಾಗಲೇ ಪ್ರಾಯೋಗಿಕವಾಗಿ ಪ್ರಸಾದ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳಿಗೆ ವಿಸ್ತರಣೆ ಮಾಡುವ ನಿರೀಕ್ಷೆ ಇದೆ ಎಂಬ ವಿಚಾರವನ್ನು ಸಾರಿಗೆ ಇಲಾಖೆ ಆಯುಕ್ತರ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಇ-ಪ್ರಸಾದ ಸೇವೆಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ತಮ್ಮ ಪ್ರಸ್ತಾಪದಲ್ಲಿ ತಿಳಿಸಿದರು
ಸದ್ಯಕ್ಕೆ ಯಾವೆಲ್ಲ ದೇವಾಲಯಗಳ ಪ್ರಸಾದ ಆನ್ಲೈನ್ ಆರ್ಡರ್ ಮೂಲಕ ಲಭ್ಯವಿದೆ ?
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ದ.ಕ
- ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ, ಉಡುಪಿ
- ಶ್ರೀ ವಿನಾಯಕ ಸ್ವಾಮಿ ದೇವಾಲಯ ಜಯನಗರ, ಬೆಂಗಳೂರು
- ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮಂಡ್ಯ
- ನAಜನಗೂಡು ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯ, ಮೈಸೂರು
- ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಲೂರು, ಕೋಲಾರ
- ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಹಲಸೂರು ಬೆಂಗಳೂರು
- ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಗವೀಪುರಂ ಬೆಂಗಳೂರು
- ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೀದರ್
- ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನಗುಡ್ಡ ಬೆಳಗಾವಿ
- ಶ್ರೀ ಕನಕ ದುರ್ಗಮ್ಮ ದೇವಾಲಯ, ಬಳ್ಳಾರಿ
- ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಹೂವಿನಹಡಗಲಿ, ವಿಜಯನಗರ
- ಶ್ರೀ ಹುಲಿಗಮ್ಮ ದೇವಾಲಯ ಹುಲಿಗಿ, ಕೊಪ್ಪಳ
- ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಗಾಣಗಾಪುರ ಗುಲ್ಬರ್ಗ
ಆನ್ ಲೈನ್ ಮಾಡುವ ವಿಧಾನ
ಸರಕಾರದ csc e-governance services india ವೆಬ್ ಸೈಟ್ ಗೆ ಲಾಗಿನ್ ಆಗುವುದರ ಮೂಲಕ ತಮಗೆ ಬೇಕಾದ ಪ್ರಸಾದ ಅಥವಾ ಇನ್ನಿತರ ದೇವರ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಬಹುದು. ವೆಬ್ ಸೈಟ್ ಲಿಂಕ್ ಇಲ್ಲಿದೆ http://http://www.csc.devalaya.com
ಪ್ರಸಾದ, ದೇವರ ಚಿತ್ರ, ಮಹಿಮೆ, ಸ್ತೋತ್ರ ಮತ್ತು ದಾರ ಭಕ್ತರಿಗೆ ತಲುಪಿಸಲಾಗಿದೆ
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಡಾ| ಎಂ.ವಿ ವೆಂಕಟೇಶ್ ಪ್ರಕಾರ, csc e-governance services india limited ಸಂಸ್ಥೆಯ ಸಹಯೋಗದಲ್ಲಿ, ರಾಜ್ಯದ 14 ದೇವಾಲಯಗಳ ಪ್ರಸಾದ, ದೇವರ ಚಿತ್ರ ಮತ್ತು ದಾರ, ದೇವಾಲಯದ ಮಹಿಮೆ ಹಾಗೂ ಸ್ತೋತ್ರವನ್ನು ಮುದ್ರಿಸಿ ಭಕ್ತರಿಗೆ ತಲುಪಿಸಲಾಗಿದೆ. ಈಗಾಗಲೇ 241 ಪ್ರಸಾದ ಪ್ಯಾಕೆಟ್ಗಳನ್ನು ಭಕ್ತರಿಗೆ ಕಳುಹಿಸಿಕೊಡಲಾಗಿದೆ.
ಆನ್ ಲೈನ್ ಮೂಲಕ ಆರ್ಡರ್ ಮಾಡಿದರೆ ಮೂರೂ ಅಥವಾ ನಾಲ್ಕು ದಿನಗಳಲ್ಲಿ ಪ್ರಸಾದ ತಲುಪಲಿರುವುದು. ಮಾತ್ರವಲ್ಲದೆ ಪ್ರತೀ ಗ್ರಾ.ಪಂ ನಲ್ಲೂ ಸಿಎಸ್ಸಿ ಸೇವೆ ಇದ್ದು, ಭಕ್ತರು ಅಲ್ಲಿಗೆ ತೆರಳಿಯೂ ತಮಗೆ ಬೇಕಾದ ದೇವಾಲಯದ ಪ್ರಸಾದವನ್ನು ಪಡೆಯಬಹುದಾಗಿದೆ