07 June 2025 | Join group

ಅನ್ಯಕೋಮಿನ ಯುವಕನೋರ್ವ ಕಾಲೇಜು ವಿದ್ಯಾರ್ಥಿಗೆ ಬಸ್ಸಿನಲ್ಲಿ ಕಿರುಕುಳ : ಪೊಲೀಸರಿಗೆ ಒಪ್ಪಿಸಿದ ಕಲ್ಲಡ್ಕದ ಸಾರ್ವಜನಿಕರು.

  • 28 Mar 2025 03:09:55 PM

ಬಂಟ್ವಾಳ : ಪುತ್ತೂರಿನಿಂದ ಮಂಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದಿದೆ. ಆರೋಪಿಯನ್ನು ಕಲ್ಲಡ್ಕದಲ್ಲಿ ಸ್ಥಳೀಯರು ಹಿಡಿದು ನಗರ ಠಾಣೆಯ ಪೋಲಿಸರಿಗೆ ಗುರುವಾರ ಸಂಜೆ ಒಪ್ಪಿಸಿದ್ದಾರೆ.

 

ಬೇರೆ ಸ್ಥಳೀಯ ಮಾಧ್ಯಮಗಳಲ್ಲಿ ಹೇಳಿದ ಪ್ರಕಾರ, ತನ್ನ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯ ಮೈಮೇಲೆ ಉದ್ದೇಶಪೂರ್ವಕವಾಗಿ ಬಿದ್ದುಕೀಟಲೆ ನೀಡಿದ್ದ ಆರೋಪಿ ನಾವೂರ ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ಗುರುತಿಸಲಾಗಿದೆ.

 

ರಿಕ್ಷಾ ಚಾಲಕನಾಗಿರುವ ಆತ ಪುತ್ತೂರಿನಿಂದ ಬಿ ಸಿ ರೋಡ್ ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ರೀತಿಯ ವರ್ತನೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಬಸ್ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.

 

ನಿರ್ವಾಹಕ ಆತನಿಗೆ ಬುದ್ಧಿವಾದ ಹೇಳಿ ಸರಿಯಾಗಿ ಪ್ರಯಾಣಿಸುವಂತೆ ತಿಳಿಸಿದ್ದ, ಈ ವೇಳೆ ಆರೋಪಿಯು ತಾನು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಗೊತ್ತಾಗಿ ತಾನು ಇನ್ನೇನು ಸಿಕ್ಕಿ ಬೀಳುವ ಹೆದರಿಕೆಯಿಂದ ಕಲ್ಲಡ್ಕದಲ್ಲಿ ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ, ಆ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಈತನನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.

 

ಸ್ಥಳೀಯರು ಕೂಡಲೇ ಆತನನ್ನು ಹಿಡಿದು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಒಪ್ಪಿಸಿದ್ದು. ಆತನ ವಿರುದ್ಧ ಬಗ್ಗೆ ಪ್ರಕರಣ ದಾಖಲಾಗಿದೆ.