ಸಕಲೇಶಪುರದ ಹತ್ತಿರ ಇರುವ ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿರುವ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ಐದು ಕಿಲೋಮೀಟರ್ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಈ ಕೋಟೆ 12 ಅಡಿಗಳ ಎತ್ತರದ ಗೋಡೆಗಳಿಂದ ಕೂಡಿದೆ. ಇದು ಸಕಲೇಶಪುರದಲ್ಲಿರುವದರಿಂದ ಇಲ್ಲಿನ ಮಂಜಿನ ವಾತಾವರಣದಿಂದಾಗಿ ಇದು ಮಂಜಿನಕೋಟೆ ಅಥವಾ ಮಂಜರಾಬಾದ್ ಕೋಟೆ ಎಂದು ಪ್ರಸಿದ್ಧವಾಗಿದೆ.
ನಕ್ಷತ್ರ ಆಕಾರದ ಈ ಕೋಟೆಯನ್ನು ನಿರ್ಮಿಸಿದ್ದು ಯಾರು ಗೊತ್ತಾ ?
ಮಲೆನಾಡಿನ ತಪ್ಪಲು ಪ್ರಕೃತಿಯ ಮಡಿಲು ಎಂದು ಪ್ರಸಿದ್ಧವಾಗಿರುವ ಸಕಲೇಶಪುರದಲ್ಲಿ ಇದೆ ಈ ಸುಂದರವಾದ ಕೋಟೆ. ಮಂಜರಾಬಾದ್ ಕೋಟೆಯ ವಿಭಿನ್ನತೆ ಏನಂದರೆ, ಕೋಟೆಯು ನಕ್ಷತ್ರ ಆಕಾರದಿಂದ ಕೂಡಿದೆ ಹಾಗೂ ಈ ಕೋಟೆ ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿತ್ತು. ಇದು ಕೇವಲ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಾಣಗೊಂಡಿದೆ ಎಂಬುವುದು ವಿಶೇಷ.
ಮಂಜರಾಬಾದ್ ಕೋಟೆಯ ಇತಿಹಾಸ
ಮಂಜರಾಬಾದ್ ಕೋಟೆಯನ್ನು ಸುಮಾರು 1785-1792ರ ಇಸವಿಯಲ್ಲಿ ಟಿಪ್ಪು ಸುಲ್ತಾನನಿಂದ ಕಟ್ಟಲ್ಪಟ್ಟಿತು. ಇದನ್ನು ಎರಡು ಹಂತದಲ್ಲಿ ನಿರ್ಮಿಸಲಾಗಿತ್ತು. ಮೊದಲ ಹಂತವನ್ನು ಸಕಲೇಶಪುರ ತಾಲೂಕಿನ ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿ ದೊರಕಿದೆ. ನಂತರ ಇದು ಟಿಪ್ಪುವಿನಿಂದ ಪುನರ್ ಕಟ್ಟಲ್ಪಟ್ಟಿತು. ಬ್ರಿಟಿಷರು ಈ ಕೋಟೆಯನ್ನು ವಶಕ್ಕೆ ಪಡೆದು ಕೊಂಡ ನಂತರ ಇದರ ಹಲವು ಭಾಗಗಳು ನಾಶಗೊಂಡಿತು.
ಕೋಟೆಯ ವಾಸ್ತು ಶಿಲ್ಪ ಹಾಗೂ ವಿನ್ಯಾಸ
ಕೋಟೆಯ ಒಳಗೆ ಹಲವು ಗೃಹಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ಉಪಹಾರ, ಶಯನ ಹಾಗೂ ಸ್ನಾನದ ಗೃಹಗಳು. ಈ ಗೃಹಗಳು ಬೇಸಿಗೆಯ ಸಮಯದಲ್ಲಿ ತಂಪಾಗಿರುತ್ತದೆ. ಇಲ್ಲಿಗೆ ಹೋದ ಪ್ರವಾಸಿಗರು ಈ ಕೋಟೆಯ ರೋಮಾಂಚಕರಿ ಸಂಗತಿಗಳನ್ನು ಕೊಂಡಾಡಿದ್ದಾರೆ. ಈ ಕೋಟೆಯ ಮೂಲಕ ಶ್ರೀರಂಗಪಟ್ಟಣ ಕೋಟೆಗೆ ಹೋಗುವ ಶೃಂಗವು ಇದೆಯಂತೆ.
ಮಂಜರಾಬಾದ್ ಕೋಟೆ ನೋಡಲು ತಲುಪುವ ವಿಧಾನ
ನೀವು ಮಂಗಳೂರು ಅಥವಾ ಬೆಂಗಳೂರು ಕಡೆಯಿಂದ ಪ್ರಯಾಣಿಸುವುದಾದರೆ, ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿರುವ ಸಕಲೇಶಪುರ ಪೇಟೆಗೆ ತಲುಪಬೇಕು. ಸಕಲೇಶಪುರ ಪಟ್ಟಣದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ ಈ ಕೋಟೆ. ಕೋಟೆಯು ಬೆಟ್ಟದ ಮೇಲಿರುವುದರಿಂದ ಇದರ ಸುತ್ತಮುತ್ತಲು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಕೋಟೆಯ ಮುಖ್ಯ ಬಾಗಿಲಿನಿಂದ ಸುಮಾರು 253 ಮೆಟ್ಟಿಲಿಗಳನ್ನು ಏರಿದ ಮೇಲೆ ಕೋಟೆಯ ತುತ್ತತುದಿಗೆ ತಲುಪಬಹುದಾಗಿದೆ. ಇದು ಸುಮಾರು ಸುಮಾರು 200 ಮೀಟರ್ ದೂರದಲ್ಲಿದೆ.