ಹಿಂದೂ ಯುವ ಸಮಾವೇಶ : ಬಿ.ಸಿ.ರೋಡಿನಲ್ಲಿ ನಡೆಯಲಿದೆ ಮಾರ್ಚ್ 02, 2025 ರಂದು

  • 14 Feb 2025 10:33:11 PM

Bantwal : ಹಿಂದೂ ಜಾಗರಣ ವೇದಿಕೆ, ಬಂಟ್ವಾಳ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ಇವರುಗಳ ಜನ್ಮ ದಿನದ ಪ್ರಯುಕ್ತ ಹಿಂದೂ ಯುವ ಸಮಾವೇಶ ಬಿ.ಸಿ ರೋಡಿನ ರಕ್ತೇಶ್ವರಿ ದೇವಸ್ಥಾನ ಮುಂಭಾಗದಲ್ಲಿ ಮಾರ್ಚ್ 02, 2025 ರಂದು ನಡೆಯಲಿದೆ.

 

ಜಾಗ್ರತಿ, ಸಂಘಟನೆ ಮತ್ತು ಸುರಕ್ಷೆ ಈ ಮೂರೂ ಅಂಶಗಳ ದ್ಯೇಯಯನ್ನು ಇಟ್ಟುಕೊಂಡು, ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಹಿಂದೂ ಜಾಗರಣ ವೇದಿಕೆ ಈ ಭವ್ಯ ಸಮಾವೇಶವನ್ನು ಹಮ್ಮಿಕೊಂಡಿದೆ.

 

ಸಮಾವೇಶದ ಸಲುವಾಗಿ ಮಧ್ಯಾಹ್ನ 3.30 ಕ್ಕೆ ಬಿ.ಸಿ ರೋಡಿನ ಕೈಕಂಬ ದ್ವಾರದಿಂದ ಶೋಭಾಯಾತ್ರೆಯನ್ನು ನಡೆಸಿ, ಆಮೇಲೆ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದಿಕ್ಸೂಚಿ ಭಾಷಣಕರಾಗಿ ಶ್ರೀ ಜಗದೀಶ್ ಕಾರಂತ್ ರವರು ಸೇರಿದ ಸಮಸ್ತ ಹಿಂದೂ ಬಾಂಧವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

ಈ ಕಾರ್ಯಕ್ರಮಕ್ಕೆ ಪ್ರಮುಖ ಹಿಂದೂ ಮುಖಂಡರು ಭಾಗವಹಿಸಲಿದ್ದಾರೆ. ಹಿಂದೂ ಜಾಗರಣ ವೇದಿಕೆ, ಬಂಟ್ವಾಳ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕರು ಮತ್ತು ಸರ್ವ ಸದಸ್ಯರು ಸಮಸ್ತ ಹಿಂದೂಗಳಿಗೆ ಅಹ್ವಾನ ನೀಡುವುದರ ಮುಖಾಂತರ, ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖೇನ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿ ಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.