ಬಂಟ್ವಾಳ, ಕಲ್ಲಡ್ಕ: ಸಮೀಪದ ಕುದ್ರೆಬೆಟ್ಟು ಬೊಲ್ಪೊಡಿ ಗದ್ದೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ವಿಟ್ಲ ಇದರ ಸ್ವಸಹಾಯ ಸಂಘಗಳ ಒಕ್ಕೂಟ ಬಾಳ್ತಿಲ ಹಾಗೂ ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ಆಶ್ರಯದಲ್ಲಿ “ಬಲೆ ಕೆಸರ್ಡ್ ಗೊಬ್ಬುಗ” ಕೆಸರುಗದ್ದೆ ಕ್ರೀಡಾಕೂಟವು ಭಾನುವಾರ ಯಶಸ್ವಿಯಾಗಿ ನಡೆಯಿತು.
ಪ್ರಾಚೀನ ಕೃಷಿ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ಗದ್ದೆಗೆ ಹಾಲು ಹಾಗೂ ಸಿಯಾಲಾ ಎರೆದು ಪುಷ್ಪ ಸಮರ್ಪಣೆ ಮಾಡುವ ಮೂಲಕ ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ, ತಂತ್ರಜ್ಞಾನ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿ ಜಗನ್ ಹಾಗೂ ಅಂಗನವಾಡಿ ಸಹಾಯಕಿ ಜಯಂತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು:
• ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ
• ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್
• ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿನ್ನಪ್ಪ ಎಲ್ತಿಮಾರ್
• ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷ ಲೋಕಾನಂದ ಎಲ್ತಿಮಾರ್
• ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ
• ಬಾಲ್ತಿಲ ಒಕ್ಕೂಟದ ಅಧ್ಯಕ್ಷೆ ಉಮಾವತಿ
• ಸೇವಾ ಪ್ರತಿನಿಧಿ ವಿದ್ಯಾ
• ಗ್ರಾಮ ಸಹಾಯಕ ದಿವಾಕರ ಚೆಂಡೆ
• ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್
• ಬಿಜೆಪಿ ಎಸ್ಸಿ ಮೋರ್ಚಾ ಬಂಟ್ವಾಳ ಅಧ್ಯಕ್ಷ ರಮೇಶ ಕುದ್ರೆಬೆಟ್ಟು
• ಬೂತ್ ಸಮಿತಿ ಅಧ್ಯಕ್ಷ ಕೇಶವ ಏಳ್ತಿಮಾರು
• ಗ್ರಾಮ ಪಂಚಾಯತ್ ಸದಸ್ಯ ಲತೀಶ್ ಕುರ್ಮನ್
• ಆರೋಗ್ಯ ಇಲಾಖೆ ಪ್ರತಿನಿಧಿ ಲೋಕೇಶ್ ಮಪಾಲ
• ಕಲಾವಿದ ರವಿ ಸಿಂಗೇರಿ
• ಮಣಿಕಂಠ ಮಾತೃಶಕ್ತಿ ಅಧ್ಯಕ್ಷೆ ಸುಜಾತಾ ಎಂ
• ಕೇಶವ ಕುಧ್ರೆಬೆಟ್ಟು, ಧನರಾಜ್ ಶೆಟ್ಟಿ ಏಳ್ತಿಮಾರು, ಸುಂದರ ಸಾಲಿಯಾನ್, ರವಿ ಬೈಲು, ಚಿನ್ನಾ ಮೈರಾ
• ಗದ್ದೆ ಮಾಲಕರು ನೀಲಾಕ್ಷಿ ಮತ್ತು ಧರ್ಮಪ್ಪ ಪೂಜಾರಿ
ಭೋಜರಾಜ್ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಸುನೀಲ್ ಕುಮಾರ್ ಮತ್ತು ಸಂತೋಷ ಕುಮಾರ್ ಬೊಲ್ಪೊಡಿ ಅವರಿಬ್ಬರೂ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಕಸೇರಿ ಗದ್ದೆಯಲ್ಲಿ ಓಟ, ಹಾಲೆ ಎಳೆತ, ಹಗ್ಗಜಗ್ಗಾಟ, ಕೋತ್ತಲಿಂಗೆ ಬ್ಯಾಟ್ ಕ್ರಿಕೆಟ್ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಯಿತು. ಈ ಸ್ಪರ್ಧೆಗಳಲ್ಲಿ ಸ್ಥಳೀಯರ ಜೊತೆಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಮೂಲದ ಯುವಕರೂ ಉತ್ಸಾಹದಿಂದ ಭಾಗವಹಿಸಿದರು.
ಪರಿಸರ ಸಂರಕ್ಷಣೆಯ ಪ್ರೇರಣೆಯಿಂದ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವಾಗಿ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.