01 July 2025 | Join group

ತುಳುನಾಡು ಜವನೆರ್ ಬೆಂಗಳೂರು(ರಿ.): 'ಅಸ್ಟೆಮಿದ ಐಸಿರ' ಕಾರ್ಯಕ್ರಮಕ್ಕೆ ಕ್ಷಣಗಣನೆ, ಹೊಸ ಸಮಿತಿ ರಚನೆ

  • 30 Jun 2025 05:50:35 PM

ಬೆಂಗಳೂರು: ತುಳುನಾಡು ಜವನೆರ್ ಬೆಂಗಳೂರು (ರಿ) ತಂಡದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಜೂನ್ 29ರ ಭಾನುವಾರ ನಡೆಯಿತು. ಬೆಂಗಳೂರಿನಲ್ಲಿ ನೆಲೆಸಿರುವ ತುಳುವರನ್ನು ಒಗ್ಗೂಡಿಸುವ ತುಳುನಾಡು ಜವನೆರ್ ಬೆಂಗಳೂರು ಸಂಘಟನೆಯು ಪ್ರತಿ ವರ್ಷ ಅದ್ದೂರಿಯಾಗಿ 'ಅಸ್ಟೆಮಿದ ಐಸಿರ' ಕಾರ್ಯಕ್ರಮವನ್ನು ನಡೆಸುಕೊಂಡು ಬಂದಿದೆ.

 

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಮುಂದಿನ ಯೋಜನೆಗಳ ತಯಾರಿ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ಈ ವರ್ಷದ 'ಅಸ್ಟೆಮಿದ ಐಸಿರ' ಪ್ರತಿ ವರ್ಷದಂತೆ ಸೆಪ್ಟೆಂಬರ್ ತಿಂಗಳಲ್ಲಿ ನೆರವೇರಲಿದ್ದು, ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಇಡೀ ದಿನದ ಕಾರ್ಯಕ್ರಮಗಳು ನಡೆಯಲಿವೆ.

 

2025-26ನೇ ಸಾಲಿನ ಪದಾಧಿಕಾರಿಗಳ ವಿವರ ಈ ರೀತಿ ಇದೆ:

ಅಧ್ಯಕ್ಷರು: ಹರಿಪ್ರಸಾದ್ ಬೇಂಗದಡಿ

ಕಾರ್ಯದರ್ಶಿ: ಹಿತಕರ್ ಮುಂಡ್ಕೂರು

ಉಪಾಧ್ಯಕ್ಷರು: ಅಶೋಕ್ ಶಾಂತಿಗುಡ್ಡೆ

ಕೋಶಾಧಿಕಾರಿ: ಶ್ರೀಪ್ರಸಾದ್

ಜತೆ ಕಾರ್ಯದರ್ಶಿ: ಸುನಿಲ್ ಕೊಡಗು,

ಕ್ರೀಡಾಸಮಿತಿ: ರಾಕೇಶ್ ಮೂಡಬಿದ್ರೆ ಮತ್ತು ತ್ರಿಶಾನ್ ಕುಡ್ಲ

ಸಾಂಸ್ಕೃತಿಕ ಸಮಿತಿ: ಅಜಿತ್ ಕಾಪು ಮತ್ತು ಧನುಷ್ ಕಾರ್ಕಳ

ಪ್ರಚಾರ ಮಾಧ್ಯಮ: ಕಾರ್ತಿಕ್ ಕಲ್ಲಡ್ಕ ಮತ್ತು ಅವಿನಾಶ್ ಕಡೇಶಿವಾಲಯ.

 

ಸೆಪ್ಟೆಂಬರ್ ಮೊದಲೆರಡು ವಾರದಲ್ಲಿ ಭವ್ಯವಾದ ಕಾರ್ಯಕ್ರಮ ನಡೆಯಲಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ. ತದನಂತರ ಕಾರ್ಯಕ್ರಮದ ತಯಾರಿಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.